<p>ಅಂತರಂಗದ ಅನುಭವ ಮಂಟಪದ ಸಾಕಾರ ಮೂರ್ತಿಯಾಗಿ ಅಕ್ಷರ ಜ್ಞಾನವಿಲ್ಲದ 770 ಶಿವಶರಣರನ್ನು ಏಕಕಾಲದಲ್ಲಿ ಅಮರಗಣoಗಳಾಗಿಸಿದ ಅನುಭವದ ಮೂರ್ತಿ ಅಪ್ಪ ಬಸವಣ್ಣನವರು.</p><p>ಜಾತಿ, ಮತ, ಪಂಥವನ್ನು ಮೀರಿ, ಸಮಸ್ತ ವಿಶ್ವ ಪರಿಪೂರ್ಣ ಶಿವ ತತ್ವವನ್ನು ಅಂಗಯಲ್ಲಿರಿಸಿ ಅನುಭಾವ ಪ್ರಭೆಯನ್ನು, ಶಿವಪೂರವನ್ನು ಬಸವ ಕಲ್ಯಾಣದ ಮಾಡಿದ ಮಹಾ ಶಿವಯೋಗಿ.</p><p>ಏನೇನ್ನಲರಿಯೇ ಎಂಬ ಸಾಮಾನ್ಯರನ್ನು ಶಿವಶರಣರನ್ನಾಗಿಸಿ ಅನುಭವ ಮಂಟಪದಲ್ಲಿ ಅಪ್ರತಿಮ ಶಿವಯೋಗ ಸಂಪನ್ನರಾಗಿಸಿದ ಕೀರ್ತಿ ಅಪ್ಪ ಬಸವಣ್ಣನವರದು,</p><p>ತಾನು ಕಿರಿಯನಾಗಿ ಶಿವಶರಣರನ್ನು ಭವ ಭಂದನದಿಂದ ಮುಕ್ತಗೊಳಿಸಿ ಶಿವಶರಣರ ಶ್ರೀ ಪಾದವ ತೋರಿ ಬದುಕಿಸು ಕೂಡಲಸಂಗಮದೇವ.. ಎಂದವರು.</p><p>ಎಲ್ಲಾ ಪವಿಯನ್ನು ಬದಿಗೊತ್ತಿ ಶರಣರ ಪಾದವೇ ಅಪ್ರತಿಮವೆಂದು, ದಾಸೋಹ ಮೂರ್ತಿಯಾಗಿ ವಿಶ್ವನ್ನೇ ನಾಚಿಸುವ ಶಿವಯೋಗ ಸಾಮ್ರಾಜ್ಯ ಸ್ಥಾಪಕರಾದ ಬಸವಣ್ಣನವರು.</p><p>ತಮ್ಮ ಜೀವಿತಾವಧಿಯನ್ನು ಅತ್ಯಂತ ಸರಳವಾಗಿ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಅಪ್ರತಿಮ ಸಾಧಕರ ಮಹಾ ನಾಯಕರು.</p><p>ಅರಿತರೆ ಶರಣ ಮರೆತರೆ ಮನವನೆಂಬ ನಿಜನೆಲೆಯ ಸಾಕಾರ ಮೂರ್ತಿಗಳು ಅಣ್ಣನವರು. ರಾಜಕೀಯವು ಶರಣರ ಪಾದಧೂಳಿಗೆ ಸಮವೆಂದು ಬಿಜ್ಜಳನ ಭಂಢಾರಿಯಾದರು. ಅದನ್ನು ತೃಣದ ಸಮಾನವೆಂದು ತೊರೆದು ಕಲ್ಯಾಣದ ಕ್ರಾಂತಿಗೆ ಮುನ್ನುಡಿ ಬರೆದ ಧೀರ ಶಿವಯೋಗಿ.</p><p>ಅನಂತಕಾಲ ಶಿವಶರಣರ ಯೋಗ ಕ್ಷೇಮವನ್ನೇ ಬಯಸಿದ, ಅವರ ನೆತ್ತರಿಗೆ ತನ್ನ ಅನುಭಾವ ನೆಲೆಯಿತ್ತ ಯೋಗಿ ಅಪ್ಪ ಬಸವಣ್ಣನವರು.</p><p>ನಿತ್ಯ ಜಂಗಮ ದಾಸೋಹ ನಡೆಸಿ ಶಿವ ಥಿಂತಿಣಿಯ ಅನುಭಾವ ಸಾರವನ್ನು ವಚನ ಸಾಹಿತ್ಯದಲ್ಲಿ ಸಂಗ್ರಹಿಸಿಟ್ಟ ಧೀಮಂತ ಶರಣರ ನಾಯಕ ಬಸವಣ್ಣನವರು.</p><p>ಹರಳಯ್ಯನ ಪಾದುಕೆಯನ್ನು ಶಿರದಲ್ಲಿರಿಸಿ ಕಂಗಳ ಕೊನೆಯ ಮೊನೆಯ ಮೂರುತಿ ಇಷ್ಟಲಿಂಗಯ್ಯನ ಪಾದಕ್ಕೆ ಅರ್ಪಿತವ ಮಾಡಿದ ಮಹಾ ನಿರಂಜನ ಬಸವಣ್ಣನವರು.</p><p>ನಾಲ್ಕು ಲಕ್ಷದ ಮೂವತ್ತಾರು ಸಾವಿರ ವಚನವ ಕನ್ನಡಮ್ಮನ ಸಾಹಿತ್ಯಕ್ಕೆ ನೀಡಿದ ಮಹಾ ಮಹಿಮ ಅಪ್ಪ ಬಸವಣ್ಣನವರು ಬಗ್ಗೆ ಒಂದು ವಚನ ಇಲ್ಲಿದೆ..</p> <p>"ಹೇಳಲಸದಳ ನಿಮ್ಮ ಮಹಿಮೆ</p><p>ಕಾರಣ ಪುರುಷನೆನ್ನಲೇ,</p><p>ಮಹಾನುಭಾವಿ ಎನ್ನಲೇ,</p><p>ಶಿವಶರಣರ ಹೃದಯವಾಸಿ</p><p>ಶ್ರೀ ಗುರುಬಸವಪ್ರಭುವೆ</p><p>ಮುರುಘೇಶನ ಕರ್ತೃ ನೀ ಬಸವೇ‘‘</p>.<p><strong>ಲೇಖನ; ಬಸವಾಕ್ಷ ಸ್ವಾಮೀಜಿ, ಶ್ರೀ ವಿರಕ್ತ ಮಠ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಂತರಂಗದ ಅನುಭವ ಮಂಟಪದ ಸಾಕಾರ ಮೂರ್ತಿಯಾಗಿ ಅಕ್ಷರ ಜ್ಞಾನವಿಲ್ಲದ 770 ಶಿವಶರಣರನ್ನು ಏಕಕಾಲದಲ್ಲಿ ಅಮರಗಣoಗಳಾಗಿಸಿದ ಅನುಭವದ ಮೂರ್ತಿ ಅಪ್ಪ ಬಸವಣ್ಣನವರು.</p><p>ಜಾತಿ, ಮತ, ಪಂಥವನ್ನು ಮೀರಿ, ಸಮಸ್ತ ವಿಶ್ವ ಪರಿಪೂರ್ಣ ಶಿವ ತತ್ವವನ್ನು ಅಂಗಯಲ್ಲಿರಿಸಿ ಅನುಭಾವ ಪ್ರಭೆಯನ್ನು, ಶಿವಪೂರವನ್ನು ಬಸವ ಕಲ್ಯಾಣದ ಮಾಡಿದ ಮಹಾ ಶಿವಯೋಗಿ.</p><p>ಏನೇನ್ನಲರಿಯೇ ಎಂಬ ಸಾಮಾನ್ಯರನ್ನು ಶಿವಶರಣರನ್ನಾಗಿಸಿ ಅನುಭವ ಮಂಟಪದಲ್ಲಿ ಅಪ್ರತಿಮ ಶಿವಯೋಗ ಸಂಪನ್ನರಾಗಿಸಿದ ಕೀರ್ತಿ ಅಪ್ಪ ಬಸವಣ್ಣನವರದು,</p><p>ತಾನು ಕಿರಿಯನಾಗಿ ಶಿವಶರಣರನ್ನು ಭವ ಭಂದನದಿಂದ ಮುಕ್ತಗೊಳಿಸಿ ಶಿವಶರಣರ ಶ್ರೀ ಪಾದವ ತೋರಿ ಬದುಕಿಸು ಕೂಡಲಸಂಗಮದೇವ.. ಎಂದವರು.</p><p>ಎಲ್ಲಾ ಪವಿಯನ್ನು ಬದಿಗೊತ್ತಿ ಶರಣರ ಪಾದವೇ ಅಪ್ರತಿಮವೆಂದು, ದಾಸೋಹ ಮೂರ್ತಿಯಾಗಿ ವಿಶ್ವನ್ನೇ ನಾಚಿಸುವ ಶಿವಯೋಗ ಸಾಮ್ರಾಜ್ಯ ಸ್ಥಾಪಕರಾದ ಬಸವಣ್ಣನವರು.</p><p>ತಮ್ಮ ಜೀವಿತಾವಧಿಯನ್ನು ಅತ್ಯಂತ ಸರಳವಾಗಿ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಅಪ್ರತಿಮ ಸಾಧಕರ ಮಹಾ ನಾಯಕರು.</p><p>ಅರಿತರೆ ಶರಣ ಮರೆತರೆ ಮನವನೆಂಬ ನಿಜನೆಲೆಯ ಸಾಕಾರ ಮೂರ್ತಿಗಳು ಅಣ್ಣನವರು. ರಾಜಕೀಯವು ಶರಣರ ಪಾದಧೂಳಿಗೆ ಸಮವೆಂದು ಬಿಜ್ಜಳನ ಭಂಢಾರಿಯಾದರು. ಅದನ್ನು ತೃಣದ ಸಮಾನವೆಂದು ತೊರೆದು ಕಲ್ಯಾಣದ ಕ್ರಾಂತಿಗೆ ಮುನ್ನುಡಿ ಬರೆದ ಧೀರ ಶಿವಯೋಗಿ.</p><p>ಅನಂತಕಾಲ ಶಿವಶರಣರ ಯೋಗ ಕ್ಷೇಮವನ್ನೇ ಬಯಸಿದ, ಅವರ ನೆತ್ತರಿಗೆ ತನ್ನ ಅನುಭಾವ ನೆಲೆಯಿತ್ತ ಯೋಗಿ ಅಪ್ಪ ಬಸವಣ್ಣನವರು.</p><p>ನಿತ್ಯ ಜಂಗಮ ದಾಸೋಹ ನಡೆಸಿ ಶಿವ ಥಿಂತಿಣಿಯ ಅನುಭಾವ ಸಾರವನ್ನು ವಚನ ಸಾಹಿತ್ಯದಲ್ಲಿ ಸಂಗ್ರಹಿಸಿಟ್ಟ ಧೀಮಂತ ಶರಣರ ನಾಯಕ ಬಸವಣ್ಣನವರು.</p><p>ಹರಳಯ್ಯನ ಪಾದುಕೆಯನ್ನು ಶಿರದಲ್ಲಿರಿಸಿ ಕಂಗಳ ಕೊನೆಯ ಮೊನೆಯ ಮೂರುತಿ ಇಷ್ಟಲಿಂಗಯ್ಯನ ಪಾದಕ್ಕೆ ಅರ್ಪಿತವ ಮಾಡಿದ ಮಹಾ ನಿರಂಜನ ಬಸವಣ್ಣನವರು.</p><p>ನಾಲ್ಕು ಲಕ್ಷದ ಮೂವತ್ತಾರು ಸಾವಿರ ವಚನವ ಕನ್ನಡಮ್ಮನ ಸಾಹಿತ್ಯಕ್ಕೆ ನೀಡಿದ ಮಹಾ ಮಹಿಮ ಅಪ್ಪ ಬಸವಣ್ಣನವರು ಬಗ್ಗೆ ಒಂದು ವಚನ ಇಲ್ಲಿದೆ..</p> <p>"ಹೇಳಲಸದಳ ನಿಮ್ಮ ಮಹಿಮೆ</p><p>ಕಾರಣ ಪುರುಷನೆನ್ನಲೇ,</p><p>ಮಹಾನುಭಾವಿ ಎನ್ನಲೇ,</p><p>ಶಿವಶರಣರ ಹೃದಯವಾಸಿ</p><p>ಶ್ರೀ ಗುರುಬಸವಪ್ರಭುವೆ</p><p>ಮುರುಘೇಶನ ಕರ್ತೃ ನೀ ಬಸವೇ‘‘</p>.<p><strong>ಲೇಖನ; ಬಸವಾಕ್ಷ ಸ್ವಾಮೀಜಿ, ಶ್ರೀ ವಿರಕ್ತ ಮಠ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>