ಒಕ್ಕೂಟ ವ್ಯವಸ್ಥೆಯನ್ನು ನೆನಪಿಸುವ ರಾಜ್ಯಗಳನ್ನು ಕೇಂದ್ರ ಸರ್ಕಾರ ಶತ್ರುವಿನಂತೆ ನೋಡುತ್ತಿದೆ. ಕೇಂದ್ರ ಸರ್ಕಾರದ ತೆರಿಗೆ ಪದ್ಧತಿಯು ಸೂತ್ರವಿಲ್ಲದ ಗಾಳಿಪಟದಂತೆ ಆಗಿರುವುದರಿಂದ, ಒಕ್ಕೂಟ ವ್ಯವಸ್ಥೆ ಏದುಸಿರು ಬಿಡುತ್ತಿದೆ. ಆದರೆ, ತೆರಿಗೆ ಅವ್ಯವಸ್ಥೆಯ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ. ಎಲ್ಲರೂ ನಿರ್ಲಕ್ಷಿಸಿರುವ ಪ್ರಶ್ನೆಗಳನ್ನು ಯುವಜನ ಕೇಳಬೇಕಾಗಿದೆ.