ಡಾ.ಕೆ.ಪಿ.ಹೆಗಡೆ, ಪ್ರಗತಿ ಚಿಕಿತ್ಸಾಲಯ, ರಾಮನಗರ
ರಾಮನಗರ ಸುತ್ತಮುತ್ತ ಇರುವ ಬುಡಕಟ್ಟು ಸಮುದಾಯವಾದ ಇರುಳಿಗರದ್ದು ಒಂದು ರೀತಿಯ ವಿಭಿನ್ನ ಬದುಕು. ಆರೋಗ್ಯ ಸಮಸ್ಯೆಯಾದರೂ ಅವರು ಆಸ್ಪತ್ರೆಗಳತ್ತ ಸುಳಿಯದೇ ತಮ್ಮಲ್ಲೇ ಔಷಧ ಮಾಡಿಕೊಂಡು ಸುಮ್ಮನಾಗುತ್ತಿದ್ದರು. ವಾಸಿಯಾದರೆ ಆಯಿತು, ಇಲ್ಲಾಂದ್ರೆ ಹಾಗೆಯೇ ನರಳುತ್ತಿದ್ದರು. ರಾಮನಗರದಲ್ಲಿ ನಾನು ಕ್ಲಿನಿಕ್ ಶುರು ಮಾಡಿದ ಬಳಿಕ, ಆಗಾಗ ಅವರಿರುವ ಗುಡಿಸಲುಗಳಿಗೆ ಒಂದಿಷ್ಟು ಔಷಧ ತುಂಬಿಕೊಂಡು ಹೋಗಿ ಉಚಿತವಾಗಿ ಚಿಕಿತ್ಸೆ ನೀಡಲು ಶುರು ಮಾಡಿದೆ.