‘ನಿಮ್ಮ ನವ್ಯ, ದಲಿತ, ಬಂಡಾಯ, ಸ್ತ್ರೀವಾದಿ, ಹಿಂಗ ಯಾವ ಚಳವಳಿದೂ ನೆರಳೂ ಸೋಕದಿದ್ದಾಂಗ ಬರೀ ಶುದ್ಧ ರಸ ಮಾತ್ರ ಇಟಗಂಡು ಬರಿಯಾಕ ಕಲಿಸ್ತಾರ್ರಿ… ಇಡೀ ಬರವಣಿಗೆದಾಗ ಒಂದೇ ಒಂದು ಸ್ಲೋಗನ್ ಇರೂ ಹಾಂಗಿಲ್ಲರಿ...’ ವಿವರಿಸಿದಳು. ‘ಅಂದ್ರ ಈ ಭೂಮಿ, ಸಮಾಜ, ಹತ್ತಾರು ಸಂಕಟ ಏನೂ ತಟ್ಟಲಾರದ್ಹಂಗ ಬರಿಯೂದನು… ಹಂಗಾರ ನೀವು ಬ್ಯಾರೆ ಗೆಲಾಕ್ಸಿಗೆ ಹೋಗಿ ಶುದ್ಧ ಜೀವನಾ ಮಾಡ್ತಾ, ಮಡಿ ಉಟ್ಕಂಡು ಕುತ್ತು ಬರಿತೀರೇನವಾ?’