‘ಗುಡಿಯಾಗಲ ದೇವರನ್ನೇ ನೋಡಿ, ತರಾವರಿ ವೆಪನ್ಸ್ ಹಿಡಿದು ಉರಿಗಣ್ಣು ಬಿಡ್ತಿಲ್ವೆ. ಕಾಳಿ, ದುರ್ಗಿ, ಮಾರಮ್ಮ, ಚಾಮುಂಡಮ್ಮ ಯಾವಮ್ಮನ್ನೇ ತಕಳ್ಳಿ, ನಾಕಾರು ಕೈನಾಗೆ ಚಾಕು, ಚೂರಿ, ತಲವಾರ್, ತ್ರಿಸೂಲ ಏನೇನೋ ಹಿಡ್ಕೊಂಡಿಲ್ವೆ? ಗಂಡಸು ದೇವರೇನು ಕಮ್ಮಿ? ಹಣೆಮ್ಯಾಗೆ ಉರಿಗಣ್ಣು ಇಕ್ಕಂಡಿರ ಈಸ್ವರ ರೇಗಿದ್ರೆ ಎದುರಿಗಿರವ್ರನ್ನ ಸುಟ್ಟು ಭಸಮ ಮಾಡ್ತಾನೆ. ವಿಷ್ಣು ಕೈನಾಗೆ ಚಕ್ರ, ಆಂಜನೇಯ ಗದೆ, ಈರಭದ್ರ ಖಡ್ಗ ಹಿಡಿದ್ರೆ, ನರಸಿಮ್ಮನದೋ ಕಳ್ಳು ಬಗೆಯೋ ಪೋಜು. ಹಿಸ್ಟರಿಗೆ ಬಂದ್ರೆ ಲೆಕ್ಕ ಇಲ್ಲದೋಟು ರುಂಡಗುಳ್ನ ಚೆಂಡಾಡಿದ ಶಿವಾಜಿ, ರಾಣಾ ಪ್ರತಾಪ, ಕೃಷ್ಣದೇವರಾಯ, ವೀರಮದಕರಿ ಅಂತಹ ಅರಸರು, ಚೆನ್ನಮ್ಮ, ಅಬ್ಬಕ್ಕ, ಝಾನ್ಸಿರಾಣಿ, ಬರೀ ಒನಕೇನಾಗೇ ಶತ್ರು ತಲೆಯೊಡೆದ ಓಬವ್ವನಂಥ ಹೆಣ್ಣಾಳು. ಇವರುಗೊಳ ಬ್ಲಡ್ಡೇ ನಮ್ಮ ಸರೀರದಾಗೂ ಹರೀತಾ ಅದೆ’ ಅಂತ ರಾಂಗ್ ಆದ.