‘ಅಲ್ಲಿಯ ಮಾರ್ಜಾಲಗಳಿಗೆ ಕ್ವಿಜ್ ಥರಾ ಪ್ರಶ್ನೆ ಕೇಳೀನಿ... ಕಬ್ಬಿಣದಿಂದ ಹಿಡಿದು ಚಿನ್ನ, ಪ್ಲಾಟಿನಂವರೆಗೆ ಏನೇ ಖನಿಜಗಳಿದ್ರೂ ನನಗ ಮಾಹಿತಿ ಗೊತ್ತಾಗತದ. ಅದನ್ನ ನಮ್ಮ ಬಳ್ಳಾರಿ ಗಣಿಮಾವಂದಿರಿಗೆ ಹೇಳತೀನಿ. ಅವ್ರು ಅಫ್ಗಾನಿಸ್ತಾನದಾಗ ಟ್ರಿಲಿಯನ್ ಡಾಲರ್ ಮೌಲ್ಯದ ಅದಿರು ಐತಿ ಅಂತ ಚೀನಾದವರ ಜೊತಿಗೆ ಸೇರಿಕ್ಯಂಡು ಅಲ್ಲಿಗೆ ಹೋಗೂ ಯೋಚನಿ ಮಾಡತಿದ್ರು. ನಾ ಹೇಳಿದೆ... ಅಲ್ಲಿ ಅದಿರಿನ ಗಣಿ ಮ್ಯಾಗೆ ತಾಲಿಬಾನೀಯರು ಬಂದೂಕು ಟ್ರಿಗರ್ ವತ್ತಿ ಕೂತಿರ್ತಾರ. ನಮ್ಮ ದೇಶದಾಗೆ ರಾಜಾರೋಷವಾಗಿ ಗಣಿ ಅಗೆದಂಗೆ ಅಲ್ಲಿ ಮಾಡಾಕೆ ಆಗಂಗಿಲ್ಲ. ಚೀನಾದವ್ರೂ ನಮಗ ಟೋಪಿ ಹಾಕಬೌದು. ಅದ್ರ ಬದಲಿಗೆ ಮಂಗಳ ಗ್ರಹದಾಗೆ ಗಣಿಗಾರಿಕೆ ಮಾಡಾಕೆ ಸ್ಕೆಚ್ ಹಾಕೂಣಂತ. ಗಣಿಮಾಮಾರೂ ಹ್ಞೂಂ ಅಂದಾರ. ನನಗೂ ಕಮಿಶನ್ ಸಿಗತೈತಿ...’