‘ತಿಂಗಳಿಗೆರಡು ಹಗರಣ ಬಯಲಾದ್ರೂ ರಾಜಕೀಯದೋವು ಅದು ನಾವಲ್ಲ, ಅದು ನಾವಲ್ಲ ಅಂತ ಅಡ್ಡಗ್ಯಾನ ಮಾಡ್ಕ್ಯಂಡು ಮುಂದ್ಲ ಗಾಳಿಗಂಟಲಿಗೆ ರೆಡಿಯಾಯ್ತವೆ! ತಮ್ಮ ಹೆಸರು ಆಚೆಗೆ ಕಡದದೇನೋ ಅಂತ ಸೀನಿಯರ್ ಸರ್ ಚಿಂತೆ! ನಾವು 20 ಪರ್ಸೆಂಟು ಕಡಿತದ ಜಾಹೀರಾತಿಗೆ ಮರುಳಾದ್ರೆ ಯಾರೂ ನಮ್ಮ ಬೆನ್ನು ಕೆರೆಯಕೆ ಬರಂಗಿಲ್ಲ. ನಾವೇ ಕೆರಕಬಕು ಕಪ್ಪಾ!’ ಅಂದ್ರು ತುರೇಮಣೆ.
‘ಈ ವೈ-ಶಾಖ ಮಾಸದೇಲಿ ಅರ್ಥ ಅಂದರೆ ನಮ್ಮ ಕಾಸು ಅಂಗಡಿಯ ಗಲ್ಲಾ ಸೇರಿಕ್ಯಂಡು ಅವರ ಸಂಪತ್ತು ಅಕ್ಷಯವಾಯ್ತದೆ. ನಮ್ಮ ಹಣೇಮ್ಯಾಲೆ ತೃತೀಯ ಅಂದ್ರೆ ಎರಡು ಬಿಳಿ ಒಂದು ಕೆಂಪು ನಾಮ ಬೀಳ್ತವೆ! ನಮಗೆ ಕುಲಸ್ವಾಮಿ, ಮನೆಸ್ವಾಮಿ ಪಾದವೇ ಗತಿ, ಗೋವಿಂದಾ!’ ಅಂತ ನಾಮ ತೇದರು.