‘ನೋಡೀಗ, ಇವರೂ ತಮ್ಮ ಕರಗಳಿಗೆ ನನ್ನ ಮೆತ್ತಿಕೊಂಡೇ ವಿಮಾನವೇರುವರು’ ಎಂದ ಸೋಪು ತನ್ನ ಭಟರಾದ ಸ್ಯಾನಿಟೈಸರುಗಳನ್ನು ಅತ್ತ ಕಳಿಸಿತು. ಇತ್ತ ‘ಯಾವ ಸೋಪಿಗೂ ನಾ ಸೊಪ್ಪು ಹಾಕೆನು’ ಎನ್ನುತ್ತ ಒಂದಿಷ್ಟು ಭಟರನ್ನು ಟ್ರಂಪಣ್ಣನ ನಾಡಿಗೆ, ಯುರೋಪಿಗೆ ಕಳಿಸಿ, ಇನ್ನೊಂದಿಷ್ಟು ಭಟರನ್ನು ಭರತಮಾತೆಯ ಹಾಟ್ ಸ್ಪಾಟ್ ಪ್ರದೇಶಗಳಿಗೆ ಕಳಿಸಿದಕೋವಿಡಣ್ಣ ‘ತೋರುವೆನು ನಾನೀಗಲೇ ಉಗ್ರಪ್ರತಾಪ...’ ಎಂದು ಹ್ಞೂಂಕರಿಸಿದ.