‘ಏನಿದು ಈ ಅವತಾರ? ಸೀತೆ, ಲಕ್ಷ್ಮಣ ರೆಲ್ಲಿ? ಇದೇನಿದು ನಿನ್ನ ಹುರಿಗಟ್ಟಿದ ಬಾಹುಗಳು... ನೀಯೇನು ಬಾಲರಾಮನೋ ಅಥವಾ ರಾಮಜಟ್ಟಿಯೋ’ ದಶರಥ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ. ‘ಹುಶ್... ಮೆತ್ತಗೆ... ಎಲ್ಲ ಕಡೆ ಕರ್ಫ್ಯೂ ಕಣ್ಗಾವಲು ಇದೆ, ನನ್ನ ಈ ಜನ್ಮಸ್ಥಾನದಲ್ಲಿ ಒಂದು ಪರ್ಮನೆಂಟ್ ದೇವಸ್ಥಾನ ಕಟ್ಟಿಸಬೇಕಂತ ಸುಪ್ರೀಂ ಆಜ್ಞೆ ಆಗಿದೆ. ಯಾರೂ ನನ್ನನ್ನ ಸೀತಾರಾಮ ಅಂತಲೂ ಕರೀತಿಲ್ಲ, ಈ ಬಿಲ್ಲು ಬಾಣ ಹೊತ್ತುಕೊಂಡು ನಿಂತೇ ಸಾಕಾಗಿದೆ’ ರಾಮಲಲ್ಲಾ ಅಲವತ್ತುಕೊಂಡ.