‘ಸುಮ್ಮಗಿರಪ್ಪ, ಕೆದಕಕೋದ್ರೆ ಬಲು ನಾರ್ತದೆ. ಆದ್ರೂ ಕೇಳು! 2021ಕ್ಕೂವೆ ದಿನಸಿ, ಪೆಟ್ರೋಲು, ಚಿನ್ನದ ರೇಟು ಇಳೀತು ಅಂತಿದ್ದಂಗೇ ಏರಿರ್ತದೆ. ರಾಜಕಾರಣಿಗಳು ನಮ್ಮನ್ನ ಕುರಿಗಳು ಅಂದುಕ್ಯಂಡು ಲೇವಡಿ ಮಾತಲ್ಲೇ ವರ್ಸೊಪ್ಪತ್ತೂ ಕಳೀತರೆ. ಕುಮಾರಣ್ಣ ನನಗೂ ಟೇಮು ಬತ್ತದೆ ಅಂತ ವರ್ಸೆಲ್ಲಾ ಕಣ್ಣೀರಾಕ್ತದೆ, ಹುಲಿಯಾ ಜನ ತಪ್ಪುತಿಳಕತರೆ ಅಂತ ಜುಲುಮೆಗೆ ಗುರುಗುಟ್ಟತಿರತದೆ. ಮಂತ್ರಿ ಕನಸು ಕಂಡೋರ್ನ, ಮೀಸಲಾತಿ ಕೇಳಿದೋರ್ನ ಸಮಾಧಾನಿಸಿ ಕುರ್ಚಿ ಭದ್ರ ಮಾಡಿಕ್ಯಳ
ದ್ರಗೇ ರಾಜಾವುಲಿ ವರ್ಸ ಕಳದೋಯತದೆ. ಪಾರಿನ್ನಿನವು ಡ್ರಗ್ ತರುತ್ಲೇ ಇರತವೆ. ಲಂಚ ಸಾಮ್ರಾಜ್ಯದ ಅಕ್ರಮ ಆಚಿಗೆ ಬಂದು ಹಂಗೇ ಇಂಗೋಯ್ತದೆ. ರೈತರು ಡೆಲ್ಲಿ ಚಳೀಲಿ ನಿಗತಕ್ಯಂಡ್ರೂ ಮೋದಿ ಕ್ಯಾರೆ ಅನ್ನದೇ ಮನ್ ಕಿ ಬಾತಲ್ಲೇ ದೋಣು ಬಾರಿಸತಿರತದೆ. ಹೊಸ ವೈರಸ್ ಬತ್ತಲೇ ಇರತವೆ. ಸರ್ಕಾರ, ಟ್ಯಾಕ್ಸು ಎಬ್ಬುತಿದ್ರೂ ಇನ್ನೂ ಬದುಕಿದೀವಿ ಕಲಾ’ ದೊಡ್ಡ ಪಟ್ಟಿ ಕೊಟ್ಟರು.