ಲಾಕ್ಡೌನ್ ಸಡಿಲ ಆಗಿದ್ದೇ ತಡ, ಖುಷಿ ತಡೀಲಾರದೆ ಹರಟೆಕಟ್ಟೆ ಗೆಳೆಯರೆಲ್ಲ ಒಂದೆಡೆ ಸೇರಿ ಫುಲ್ ಟೈಟಾದರು. ಸುಖ ದುಃಖ ಎಲ್ಲ ಹಂಚಿಕೊಂಡರು. ದೇಶ ವಿದೇಶ ಎಲ್ಲ ಮುಗಿಸಿ ರಾಜ್ಯ ರಾಜಕೀಯಕ್ಕೆ ಬಂದರು. ಮಾತು ಜೋಲಿ ಹೊಡೆಯತೊಡಗಿತು.
ಗುಡ್ಡೆ ತೊದಲುತ್ತ ‘ಲೇಯ್ ಕೇಳ್ರಲೆ ಇಲ್ಲಿ, ಮುಂದಿನ ಮುಖ್ಯಮಂತ್ರಿ ನಾನೇ’ ಎಂದ.