ನಾಕಾರು ದಿನದಿಂದ ನಾಪತ್ತೆಯಾಗಿದ್ದ ಬೆಕ್ಕಣ್ಣ ಬೆಳಗ್ಗೆ ಆಕಳಿಸುತ್ತ ಬಂದಿತು. ‘ಎಲ್ಲಿ ಹೋಗಿದ್ಯಲೇ... ಬೇಕಾದಾಗ ಬರೂದು, ಬ್ಯಾಡಾದಾಗ ಹೋಗಾಕ ನೀಯೇನ್ ಅತೃಪ್ತ ಶಾಸಕ ಆಗೀಯೇನು? ಮಥುರಾದಾಗ ‘ಯಮ ದ್ವಿತೀಯ’ ಆಚರಣೆಯಂತ, ಯಮುನಾ ನದಿ ಯಾಗ ಮುಳುಗೆದ್ದರೆ ಪುಣ್ಯ ಬರ್ತದಂತ ಹೋಗಿ ದ್ಯೇನ್ ಮತ್ತ’ ಎಂದು ಜಬರಿಸಿದೆ. ‘ನದೀ ಕೊಳಕು ನೋಡಿದರೆ ‘ಯಮ ದ್ವಿತೀಯ’ ಅಲ್ಲ, ‘ಯಮ ಪ್ರಥಮ ಚುಂಬನ’ ಆಗೂದು ಗ್ಯಾರಂಟಿ, ನಾ ಎದಕ್ಕ ಹೋಗಲಿ’ ಎಂದು ಮೂತಿ ಉಬ್ಬಿಸಿತು.