‘ಉತ್ತರಪ್ರದೇಶ ಮೊದ್ಲು ಗೂಂಡಾರಾಜ್ ಆಗಿತ್ತು, ಈಗ ಯೋಗಿರಾಜ್ ಆಗೈತಿ. ಇನ್ನೇನ್ ಶಾಂತಿ ಬೇಕು? ಹೋಗಲಿ,ಮೋದಿ ಮಾಮಗಾದ್ರೂ ಕೊಡಬೌದಿತ್ತಿಲ್ಲೋ... ವಿಶ್ವಗುರು ಆಗೂದು ಅಂದ್ರ ಅಷ್ಟು ಸರಳ ಐತೇನು. ಇಡೀ ಬ್ರಹ್ಮಾಂಡದೊಳಗ ಮೋದಿಮಾಮನಷ್ಟು ಜನಪ್ರಿಯ ವಿಶ್ವಗುರು ಯಾರೂ ಇಲ್ಲ. ಸಂಸತ್ತಿನಿಂದ ನಾಕೈದು ಮೈಲಿ ದೂರದಾಗೆ ಹತ್ತು ತಿಂಗಳಿನಿಂದ ರೈತ್ರು ಅಷ್ಟೆಲ್ಲ ಪ್ರತಿಭಟನೆ ಮಾಡಿಕೋತ ಗದ್ದಲ ಎಬ್ಬಿಸಿದರೂ ಮೋದಿಮಾಮ ಎಷ್ಟ್ ಶಾಂತಿಯಿಂದ ಮೌನವಾಗೇ ಉತ್ತರ ಕೊಡಾಕ ಹತ್ಯಾನ. ಹೀಂಗ ಶಾಂತಿ ಕಾಪಾಡೂದಂದ್ರ ಸರಳ ಅಂದ್ಕಂಡಿಯೇನ್...’ ಎಂದೆಲ್ಲ ಅಲವತ್ತು
ಕೊಂಡಿತು.