‘ಸಂಗ್ಯಾ-ಬಾಳ್ಯಾ’, ‘ಜೋಕುಮಾರಸ್ವಾಮಿ’, ‘ಸತ್ತವರ ನೆರಳು’ ಮತ್ತೆ ಹಿರಣ್ಣಯ್ಯ ಅವರ ‘ಲಂಚಾವತಾರ’ ಹಾಗೂ ಟಿ.ಎನ್.ಸೀತಾರಾಮ್ ಅವರ ‘ಆಸ್ಫೋಟ’, ‘ನಮ್ಮೊಳಗೊಬ್ಬ ನಾಜೂಕಯ್ಯ’, ಮುಖ್ಯಮಂತ್ರಿ ಚಂದ್ರು ಅಭಿನಯದ ‘ಮುಖ್ಯಮಂತ್ರಿ’ ನಾಟಕಗಳ ರಾಜಕೀಯ, ವರ್ತಮಾನದ ವಿಡಂಬನೆಗಳು ಕೊಟ್ಟ ಖುಷೀನೇ ಬೇರೆ ಅಂದುಕೊಳ್ಳುವಷ್ಟರಲ್ಲಿ, ಒಂದು ಪಾಂಪ್ಲೆಟ್ ಮುಂದೆ ಹಿಡಿದ ಒಬ್ಬ ಯುವಕ ‘ಸರ್, 22ನೇ ತಾರೀಖು ನಮ್ಮ ನಾಟಕ ‘ವೇಷ-ರೋಷ’ ಯಕ್ಷಗಾನ ಬಳಸಿ ಮಾಡಿರೋ ಹೊಸ ಪ್ರಯೋಗ. ಮೂಲ ಹಿಂದಿ ‘ಹಿಜಾಬ್- ಕಿತಾಬ್’ ಅಂತ, ದಯವಿಟ್ಟು ಬನ್ನಿ ಪ್ರೋತ್ಸಾಹಿಸಿ’ ಅಂದ.