<p>ಬಿಬಿಎಂಪಿ ಕಚೇರಿ ಎದುರು ಬೀದಿನಾಯಿಗಳು ನಾಲಿಗೆ ಚಾಚಿಕೊಂಡು ಕುಳಿತಿದ್ದವು.</p>.<p>ಹಿರಿಯ ಅಧಿಕಾರಿ ಬಂದು, ‘ನಾಯಿಗಳು ಪ್ರತಿಭಟನೆ ಮಾಡ್ತಿವೆಯೇನ್ರೀ?’ ಎಂದು ಕೇಳಿದರು.</p>.<p>‘ಬಾಡು ಭಾಗ್ಯ ಯೋಜನೆ ಯಾವಾಗಿನಿಂದ, ಮೆನು ಏನೇನು ಎಂದು ತಿಳಿಯಲು ನಾಯಿಗಳು ಬಂದಿರಬಹುದು ಸಾರ್’ ಕಿರಿಯ ಅಧಿಕಾರಿ ಹೇಳಿದರು.</p>.<p>‘ಬಾಡು ಭಾಗ್ಯ ಯೋಜನೆಯನ್ನು ಪ್ರಾಣಿದಯಾ ಸಂಘದವರು ಸ್ವಾಗತಿಸಿದ್ದಾರೆ ಕಣ್ರೀ’.</p>.<p>‘ಆದರೆ, ಪ್ರಾಣಿ ಭಯಾ ಸಂಘದವರು ಆಕ್ಷೇಪ ಮಾಡಿದ್ದಾರೆ. ನಾಯಿಗಳಿಗೆ ಮಾಂಸದ ರುಚಿ ತೋರಿಸಿದರೆ ಮನುಷ್ಯರನ್ನು ಕಚ್ಚುತ್ತವಂತೆ’.</p>.<p>‘ಬಾಡು ಭಾಗ್ಯ ಉಂಡುಕೊಂಡಿರಿ, ಮನುಷ್ಯರ ಮೇಲೆ ದಾಳಿ ಮಾಡಬೇಡಿ ಎಂದು ನಾಯಿ ತಜ್ಞರಿಂದ ನಾಯಿಗಳಿಗೆ ಬುದ್ಧಿ ಹೇಳಿಸಬೇಕು’.</p>.<p>‘ಕಚ್ಚೋದು, ಬೊಗೊಳೋದು ನಾಯಿಗಳ ಹುಟ್ಟುಗುಣ ಸಾರ್. ಪ್ಲೇಟ್ ಮೀಲ್ಸ್ ಕೊಟ್ಟರೆ ಅವು<br />ಮನುಷ್ಯರನ್ನು ಕಚ್ಚುತ್ತವೆ, ಫುಲ್ ಮೀಲ್ಸ್ ಕೊಟ್ಟರೆ ತಿಂದು ತೆಪ್ಪಗಿರ್ತವೆ’.</p>.<p>‘ನಾಯಿಗಳು ಉಭಯ ಆಹಾರಿಗಳು. ವೆಜ್, ನಾನ್ವೆಜ್ ಎರಡನ್ನೂ ತಿನ್ನುತ್ತವೆ’.</p>.<p>‘ಮಾಂಸದ ರುಚಿ ಕಂಡ ನಾಯಿಗಳು ಅನ್ನ–ಸಾಂಬಾರ್ ಮೂಸಿ ನೋಡಲ್ಲ ಸಾರ್...’</p>.<p>ಅಷ್ಟೊತ್ತಿಗೆ ನಾಯಿಗಳ ಇನ್ನೊಂದು ಗುಂಪು ಬಂತು. ಈ ನಾಯಿಗಳು ಆ ನಾಯಿಗಳ ಮೇಲೆ ದಾಳಿ ಮಾಡಿ ಕಚ್ಚಾಡಿದವು.</p>.<p>‘ಯಾಕ್ರಿ ನಾಯಿಗಳು ಹೀಗೆ ಕಚ್ಚಾಡ್ತಿವೆ?’ ಎಂದು ಹಿರಿಯ ಅಧಿಕಾರಿ ಕೇಳಿದರು.</p>.<p>‘ಸಾರ್, ಬಾಡು ಭಾಗ್ಯ ಅರಸಿ ಹೊರ ಊರಿನಿಂದ ಬೆಂಗಳೂರಿಗೆ ವಲಸೆ ಬಂದ ನಾಯಿಗಳವು. ಅಕ್ರಮ ನಿವಾಸಿಗಳ ವಿರುದ್ಧ ಮೂಲ ನಿವಾಸಿಗಳು ಸಿಟ್ಟಿಗೆದ್ದಿವೆ’.</p>.<p>‘ಬೆಂಗಳೂರು ನಾಯಿಗಳಿಗೆ ವಾಸಸ್ಥಳ ಪತ್ರ ವಿತರಿಸಿ’.</p>.<p>‘ನಾಯಿಗಳು ಪತ್ರವನ್ನು ಎಲ್ಲಿ ಇಟ್ಟುಕೊಳ್ತವೆ ಸಾರ್? ಪತ್ರದ ಬದಲು ಬಿಬಿಎಂಪಿಯ ಬೆಲ್ಟ್ ಕಟ್ಟಿ ನಮ್ಮ ನಾಯಿಗಳನ್ನು ದೃಢೀಕರಿಸಿಕೊಳ್ಳೋಣ’ ಎಂದರು ಕಿರಿಯ ಅಧಿಕಾರಿ.</p>.<p>‘ವೆರಿ ಗುಡ್, ಒಳ್ಳೆಯ ಐಡಿಯಾ...’ ಎಂದು ಹಿರಿಯ ಅಧಿಕಾರಿ ಹೊರಟರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಿಬಿಎಂಪಿ ಕಚೇರಿ ಎದುರು ಬೀದಿನಾಯಿಗಳು ನಾಲಿಗೆ ಚಾಚಿಕೊಂಡು ಕುಳಿತಿದ್ದವು.</p>.<p>ಹಿರಿಯ ಅಧಿಕಾರಿ ಬಂದು, ‘ನಾಯಿಗಳು ಪ್ರತಿಭಟನೆ ಮಾಡ್ತಿವೆಯೇನ್ರೀ?’ ಎಂದು ಕೇಳಿದರು.</p>.<p>‘ಬಾಡು ಭಾಗ್ಯ ಯೋಜನೆ ಯಾವಾಗಿನಿಂದ, ಮೆನು ಏನೇನು ಎಂದು ತಿಳಿಯಲು ನಾಯಿಗಳು ಬಂದಿರಬಹುದು ಸಾರ್’ ಕಿರಿಯ ಅಧಿಕಾರಿ ಹೇಳಿದರು.</p>.<p>‘ಬಾಡು ಭಾಗ್ಯ ಯೋಜನೆಯನ್ನು ಪ್ರಾಣಿದಯಾ ಸಂಘದವರು ಸ್ವಾಗತಿಸಿದ್ದಾರೆ ಕಣ್ರೀ’.</p>.<p>‘ಆದರೆ, ಪ್ರಾಣಿ ಭಯಾ ಸಂಘದವರು ಆಕ್ಷೇಪ ಮಾಡಿದ್ದಾರೆ. ನಾಯಿಗಳಿಗೆ ಮಾಂಸದ ರುಚಿ ತೋರಿಸಿದರೆ ಮನುಷ್ಯರನ್ನು ಕಚ್ಚುತ್ತವಂತೆ’.</p>.<p>‘ಬಾಡು ಭಾಗ್ಯ ಉಂಡುಕೊಂಡಿರಿ, ಮನುಷ್ಯರ ಮೇಲೆ ದಾಳಿ ಮಾಡಬೇಡಿ ಎಂದು ನಾಯಿ ತಜ್ಞರಿಂದ ನಾಯಿಗಳಿಗೆ ಬುದ್ಧಿ ಹೇಳಿಸಬೇಕು’.</p>.<p>‘ಕಚ್ಚೋದು, ಬೊಗೊಳೋದು ನಾಯಿಗಳ ಹುಟ್ಟುಗುಣ ಸಾರ್. ಪ್ಲೇಟ್ ಮೀಲ್ಸ್ ಕೊಟ್ಟರೆ ಅವು<br />ಮನುಷ್ಯರನ್ನು ಕಚ್ಚುತ್ತವೆ, ಫುಲ್ ಮೀಲ್ಸ್ ಕೊಟ್ಟರೆ ತಿಂದು ತೆಪ್ಪಗಿರ್ತವೆ’.</p>.<p>‘ನಾಯಿಗಳು ಉಭಯ ಆಹಾರಿಗಳು. ವೆಜ್, ನಾನ್ವೆಜ್ ಎರಡನ್ನೂ ತಿನ್ನುತ್ತವೆ’.</p>.<p>‘ಮಾಂಸದ ರುಚಿ ಕಂಡ ನಾಯಿಗಳು ಅನ್ನ–ಸಾಂಬಾರ್ ಮೂಸಿ ನೋಡಲ್ಲ ಸಾರ್...’</p>.<p>ಅಷ್ಟೊತ್ತಿಗೆ ನಾಯಿಗಳ ಇನ್ನೊಂದು ಗುಂಪು ಬಂತು. ಈ ನಾಯಿಗಳು ಆ ನಾಯಿಗಳ ಮೇಲೆ ದಾಳಿ ಮಾಡಿ ಕಚ್ಚಾಡಿದವು.</p>.<p>‘ಯಾಕ್ರಿ ನಾಯಿಗಳು ಹೀಗೆ ಕಚ್ಚಾಡ್ತಿವೆ?’ ಎಂದು ಹಿರಿಯ ಅಧಿಕಾರಿ ಕೇಳಿದರು.</p>.<p>‘ಸಾರ್, ಬಾಡು ಭಾಗ್ಯ ಅರಸಿ ಹೊರ ಊರಿನಿಂದ ಬೆಂಗಳೂರಿಗೆ ವಲಸೆ ಬಂದ ನಾಯಿಗಳವು. ಅಕ್ರಮ ನಿವಾಸಿಗಳ ವಿರುದ್ಧ ಮೂಲ ನಿವಾಸಿಗಳು ಸಿಟ್ಟಿಗೆದ್ದಿವೆ’.</p>.<p>‘ಬೆಂಗಳೂರು ನಾಯಿಗಳಿಗೆ ವಾಸಸ್ಥಳ ಪತ್ರ ವಿತರಿಸಿ’.</p>.<p>‘ನಾಯಿಗಳು ಪತ್ರವನ್ನು ಎಲ್ಲಿ ಇಟ್ಟುಕೊಳ್ತವೆ ಸಾರ್? ಪತ್ರದ ಬದಲು ಬಿಬಿಎಂಪಿಯ ಬೆಲ್ಟ್ ಕಟ್ಟಿ ನಮ್ಮ ನಾಯಿಗಳನ್ನು ದೃಢೀಕರಿಸಿಕೊಳ್ಳೋಣ’ ಎಂದರು ಕಿರಿಯ ಅಧಿಕಾರಿ.</p>.<p>‘ವೆರಿ ಗುಡ್, ಒಳ್ಳೆಯ ಐಡಿಯಾ...’ ಎಂದು ಹಿರಿಯ ಅಧಿಕಾರಿ ಹೊರಟರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>