<p>‘ಇನ್ಮೇಲೆ ನಾನು ಕಾಲೇಜಿಗೆ ಹೋಗೋದಿಲ್ಲ...’ ಬೇಸರದಿಂದ ಹೇಳಿದರು ಗಿರಿ.</p>.<p>‘ಹಾಗೆಲ್ಲಾ ಹಟ ಮಾಡಬೇಡಿ, ಕಾಲೇಜಿಗೆ ಹೋದ್ರೆ ಭವಿಷ್ಯ ಉಜ್ವಲವಾಗುತ್ತೆ, ಬದುಕು ಬಂಗಾರವಾಗುತ್ತೆ’ ಮನವೊಲಿಸುವ ಪ್ರಯತ್ನ ಮಾಡಿದರು ಅನು.</p>.<p>‘ನಾನು ಹಟ ಮಾಡ್ತಿಲ್ಲ, ನಮ್ಮನ್ನು ಕಾಲೇಜಿಗೆ ಸೇರಿಸುವುದಿಲ್ಲ ಅಂತ ಸರ್ಕಾರವೇ ಹಟ ಮಾಡ್ತಿದೆ. ನನ್ನಂತಹ ಐದು ಸಾವಿರ ಅತಿಥಿ ಉಪನ್ಯಾಸಕರನ್ನು ಮನೆಗೆ ಕಳಿಸಿದೆ. ನಾವು ಒಳ್ಳೆಯ ಲೆಕ್ಚರರ್ಗಳಲ್ವಂತೆ’.</p>.<p>‘ವಿದ್ಯಾರ್ಥಿಗಳಿಗೆ ನೀವು ಮೆಚ್ಚಿನ ಮೇಷ್ಟ್ರು ಆಗಿದ್ದೀರಿ. ನಿಮ್ಮ ಸಬ್ಜೆಕ್ಟ್ನಲ್ಲಿ ಈ ವರ್ಷ ಉತ್ತಮ ಫಲಿತಾಂಶ ಕೊಟ್ಟಿದ್ದೀರಿ, ಇಷ್ಟು ಸಾಲದಂತಾ?’</p>.<p>‘ವಿದ್ಯಾರ್ಥಿಗಳು ಮೆಚ್ಚಿದರೆ ಸಾಕಾಗುವುದಿಲ್ಲ, ಸರ್ಕಾರ ನಮ್ಮನ್ನು ಮೆಚ್ಚಬೇಕು’.</p>.<p>‘ಸರ್ಕಾರದ ಮುಂದೆಯೇ ಪಾಠ ಹೇಳಿ ನಿಮ್ಮ ಬೋಧನಾ ಸಾಮರ್ಥ್ಯ ತೋರಿಸಿ’.</p>.<p>‘ಕಾಲೇಜಿನಲ್ಲಿ ಪಾಠ ಹೇಳಲು ನಮ್ಮ ಕ್ವಾಲಿಫಿಕೇಷನ್ ಸಾಕಾಗುತ್ತಿಲ್ಲವಂತೆ. <br>ಎಕ್ಸ್ಪೀರಿಯನ್ಸ್ಗಿಂತ ಸರ್ಟಿಫಿಕೇಟ್ <br>ಕ್ವಾಲಿಫಿಕೇಷನ್ನೇ ಮುಖ್ಯವಂತೆ’.</p>.<p>‘ನಮಗೆ ಕಾಲೇಜಿಗೆ ಹೋಗುವ ಮಕ್ಕಳಿದ್ದಾರೆ, ಸಂಸಾರದ ಖರ್ಚುವೆಚ್ಚ ಹೆಚ್ಚಾಗಿದೆ. ಈ <br>ಪರಿಸ್ಥಿತಿಯಲ್ಲಿ ನೀವು ಕಾಲೇಜು ಕೆಲ್ಸ ಕಳೆದುಕೊಂಡರೆ ಸಂಸಾರದ ನಿರ್ವಹಣೆ ಹೇಗ್ರೀ?’ ಅನು ಕಳವಳಗೊಂಡರು.</p>.<p>‘ಪರ್ಯಾಯ ಆದಾಯದ ಮಾರ್ಗ ನೋಡಿಕೊಳ್ಳಬೇಕು’.</p>.<p>‘ಪಾಠ ಹೇಳುವುದು ಬಿಟ್ಟರೆ ನಿಮಗೆ ಬೇರೆ ಕಸುಬು ಗೊತ್ತಿಲ್ಲವಲ್ರೀ’.</p>.<p>‘ಮುಂದೆ ಏನು ಮಾಡಬೇಕು ಎಂದು ಅತಿಥಿ ಉಪನ್ಯಾಸಕ ಗೆಳೆಯರು ಚರ್ಚೆ ಮಾಡ್ತೀವಿ’.</p>.<p>‘ಚರ್ಚಿಸಲು ಎಲ್ಲಿ ಸಭೆ ಸೇರ್ತೀರಿ?’</p>.<p>‘ಕೆಲಸ ಕಳೆದುಕೊಂಡ ಅತಿಥಿ ಉಪನ್ಯಾಸಕ ಗೆಳೆಯನೊಬ್ಬ ಫುಟ್ಪಾತ್ನಲ್ಲಿ ತರಕಾರಿ ಅಂಗಡಿ ಇಟ್ಟಿದ್ದಾನೆ. ಆ ಅಂಗಡಿಯಲ್ಲಿ ಕುಳಿತು ಚರ್ಚೆ ಮಾಡಿ, ಮುಂದೆ ನಾವು ಯಾವ ವ್ಯವಹಾರ, ವ್ಯಾಪಾರ ಆರಂಭಿಸಿ ಬದುಕು ಕಟ್ಟಿಕೊಳ್ಳಬೇಕು ಅಂತ ತೀರ್ಮಾನ ಮಾಡ್ತೀವಿ...’ ಎಂದು ಗಿರಿ ಹೊರಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಇನ್ಮೇಲೆ ನಾನು ಕಾಲೇಜಿಗೆ ಹೋಗೋದಿಲ್ಲ...’ ಬೇಸರದಿಂದ ಹೇಳಿದರು ಗಿರಿ.</p>.<p>‘ಹಾಗೆಲ್ಲಾ ಹಟ ಮಾಡಬೇಡಿ, ಕಾಲೇಜಿಗೆ ಹೋದ್ರೆ ಭವಿಷ್ಯ ಉಜ್ವಲವಾಗುತ್ತೆ, ಬದುಕು ಬಂಗಾರವಾಗುತ್ತೆ’ ಮನವೊಲಿಸುವ ಪ್ರಯತ್ನ ಮಾಡಿದರು ಅನು.</p>.<p>‘ನಾನು ಹಟ ಮಾಡ್ತಿಲ್ಲ, ನಮ್ಮನ್ನು ಕಾಲೇಜಿಗೆ ಸೇರಿಸುವುದಿಲ್ಲ ಅಂತ ಸರ್ಕಾರವೇ ಹಟ ಮಾಡ್ತಿದೆ. ನನ್ನಂತಹ ಐದು ಸಾವಿರ ಅತಿಥಿ ಉಪನ್ಯಾಸಕರನ್ನು ಮನೆಗೆ ಕಳಿಸಿದೆ. ನಾವು ಒಳ್ಳೆಯ ಲೆಕ್ಚರರ್ಗಳಲ್ವಂತೆ’.</p>.<p>‘ವಿದ್ಯಾರ್ಥಿಗಳಿಗೆ ನೀವು ಮೆಚ್ಚಿನ ಮೇಷ್ಟ್ರು ಆಗಿದ್ದೀರಿ. ನಿಮ್ಮ ಸಬ್ಜೆಕ್ಟ್ನಲ್ಲಿ ಈ ವರ್ಷ ಉತ್ತಮ ಫಲಿತಾಂಶ ಕೊಟ್ಟಿದ್ದೀರಿ, ಇಷ್ಟು ಸಾಲದಂತಾ?’</p>.<p>‘ವಿದ್ಯಾರ್ಥಿಗಳು ಮೆಚ್ಚಿದರೆ ಸಾಕಾಗುವುದಿಲ್ಲ, ಸರ್ಕಾರ ನಮ್ಮನ್ನು ಮೆಚ್ಚಬೇಕು’.</p>.<p>‘ಸರ್ಕಾರದ ಮುಂದೆಯೇ ಪಾಠ ಹೇಳಿ ನಿಮ್ಮ ಬೋಧನಾ ಸಾಮರ್ಥ್ಯ ತೋರಿಸಿ’.</p>.<p>‘ಕಾಲೇಜಿನಲ್ಲಿ ಪಾಠ ಹೇಳಲು ನಮ್ಮ ಕ್ವಾಲಿಫಿಕೇಷನ್ ಸಾಕಾಗುತ್ತಿಲ್ಲವಂತೆ. <br>ಎಕ್ಸ್ಪೀರಿಯನ್ಸ್ಗಿಂತ ಸರ್ಟಿಫಿಕೇಟ್ <br>ಕ್ವಾಲಿಫಿಕೇಷನ್ನೇ ಮುಖ್ಯವಂತೆ’.</p>.<p>‘ನಮಗೆ ಕಾಲೇಜಿಗೆ ಹೋಗುವ ಮಕ್ಕಳಿದ್ದಾರೆ, ಸಂಸಾರದ ಖರ್ಚುವೆಚ್ಚ ಹೆಚ್ಚಾಗಿದೆ. ಈ <br>ಪರಿಸ್ಥಿತಿಯಲ್ಲಿ ನೀವು ಕಾಲೇಜು ಕೆಲ್ಸ ಕಳೆದುಕೊಂಡರೆ ಸಂಸಾರದ ನಿರ್ವಹಣೆ ಹೇಗ್ರೀ?’ ಅನು ಕಳವಳಗೊಂಡರು.</p>.<p>‘ಪರ್ಯಾಯ ಆದಾಯದ ಮಾರ್ಗ ನೋಡಿಕೊಳ್ಳಬೇಕು’.</p>.<p>‘ಪಾಠ ಹೇಳುವುದು ಬಿಟ್ಟರೆ ನಿಮಗೆ ಬೇರೆ ಕಸುಬು ಗೊತ್ತಿಲ್ಲವಲ್ರೀ’.</p>.<p>‘ಮುಂದೆ ಏನು ಮಾಡಬೇಕು ಎಂದು ಅತಿಥಿ ಉಪನ್ಯಾಸಕ ಗೆಳೆಯರು ಚರ್ಚೆ ಮಾಡ್ತೀವಿ’.</p>.<p>‘ಚರ್ಚಿಸಲು ಎಲ್ಲಿ ಸಭೆ ಸೇರ್ತೀರಿ?’</p>.<p>‘ಕೆಲಸ ಕಳೆದುಕೊಂಡ ಅತಿಥಿ ಉಪನ್ಯಾಸಕ ಗೆಳೆಯನೊಬ್ಬ ಫುಟ್ಪಾತ್ನಲ್ಲಿ ತರಕಾರಿ ಅಂಗಡಿ ಇಟ್ಟಿದ್ದಾನೆ. ಆ ಅಂಗಡಿಯಲ್ಲಿ ಕುಳಿತು ಚರ್ಚೆ ಮಾಡಿ, ಮುಂದೆ ನಾವು ಯಾವ ವ್ಯವಹಾರ, ವ್ಯಾಪಾರ ಆರಂಭಿಸಿ ಬದುಕು ಕಟ್ಟಿಕೊಳ್ಳಬೇಕು ಅಂತ ತೀರ್ಮಾನ ಮಾಡ್ತೀವಿ...’ ಎಂದು ಗಿರಿ ಹೊರಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>