ಹರಟೆಕಟ್ಟೆಯಲ್ಲಿ ಗುಡ್ಡೆ, ದುಬ್ಬೀರನ ಕೋಳಿ ಜಗಳ ತಾರಕಕ್ಕೇರಿತ್ತು. ‘ಲೇ ಬ್ಯಾಡ ನೋಡು, ನನ್ ಕೆಣಕಿದ್ರೆ ನಿನ್ನ ಉಕ್ರೇನ್ ತರ ದೂಳೀಪಟ ಮಾಡಿ ಬಿಸಾಕ್ತೀನಿ’ ಎಂದ ಗುಡ್ಡೆ.
ದುಬ್ಬೀರ ಏನ್ ಕಮ್ಮಿ? ‘ಲೇಯ್ ಯುದ್ಧ ಶುರುವಾಗಿ ತಿಂಗಳ ಮೇಲಾತು. ಉಕ್ರೇನ್ದು ಏನೂ ಕಿತ್ಕಳಕಾಗ್ಲಿಲ್ಲ. ನಾನು ಒಂದ್ಸಲ ಎದ್ದೆ ಅಂದ್ರೆ ನಿನ್ ಕಥೆ ಮುಗೀತು ಅಷ್ಟೆ ಈಗ...’ ಎಂದ.
ಕೊಟ್ರೇಶಿಗೆ ನಗು. ‘ಲೇ ದುಬ್ಬೀರ, ನಿಂಗೆಲ್ಲಿ ಏಳೋಕಾಗ್ತತಲೆ, ಮಂಡಿ ನೋವು ಅಂತಿದ್ದೆ?’ ಎಂದ.
‘ಮತ್ ನೋಡಲೆ... ಪೆಟ್ರೋಲು, ಹಾಲು, ಕರೆಂಟು ಎಲ್ಲ ದುಬಾರಿಯಾಗಿದಾವೆ, ಜನ ಬದುಕೋದು ಹೆಂಗೆ ಅಂದ್ರೆ ಇವ್ನು ಹಿಜಾಬ್ ನೋಡು, ಹಲಾಲ್ ನೋಡು, ಮೈಕಿನ ಸೌಂಡ್ ನೋಡು ಅಂತಾನೆ. ಅದ್ಕೂ ಇದ್ಕೂ ಏನ್ ಸಂಬಂಧ?’ ದುಬ್ಬೀರ ವಾದಿಸಿದ.
‘ಅಂದ್ರೆ? ಮೊದ್ಲು ದೇಶ ಉಳೀಬೇಕಲೆ, ಪೆಟ್ರೋಲು ಐನೂರ್ ರೂಪಾಯಾಗ್ಲಿ ನಮ್ ಧರ್ಮ ಉಳೀಬೇಕು. ನಿಮ್ಮಂಥೋರಿಂದ್ಲೇ ಬ್ರಿಟೀಷರಿಗೆ ನಾವು ಗುಲಾಮರಾಗಿದ್ದು... ಕಚಡಾ ಫೆಲೋ’ ಗುಡ್ಡೆ ಮತ್ತಷ್ಟು ರಾಂಗಾದ.