<p>‘ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಪರಿಷತ್ತಿನ ಮತದಾರರ ಬಗ್ಗೆ ಸರಿಯಾದ ಮಾಹಿತಿಯಿಲ್ಲ!’ ಬದ್ರಿಯ ಹೇಳಿಕೆ ತಿಂಗಳೇಶನ ಹುಬ್ಬೇರಿಸಿತು.</p>.<p>‘ಅತ್ಯಧಿಕ ಮತ ಪಡೆದು ಆಯ್ಕೆಯಾದ ಅಧ್ಯಕ್ಷರಿಗೇ ಮಾಹಿತಿ ಇಲ್ಲ ಅಂದ್ರೆ ಹೇಗೆ?’</p>.<p>‘ಅವರಿಗೆ ಅಧಿಕೃತ ಮಾಹಿತಿ ಇದ್ದಿದ್ದರೆ ಸಾಹಿತ್ಯ ಪರಿಷತ್ತಿನಲ್ಲಿ ಕೇವಲ ಮೂವತ್ತು ಸಾವಿರ ಹೆಬ್ಬೆಟ್ಟುಗಳು ಇದ್ದಾರೆಂದು ತಪ್ಪು ಮಾಹಿತಿ ನೀಡಿ ಬಂಡಾಯ ಸಾಹಿತಿಗಳ ದಾರಿ ತಪ್ಪಿಸುತ್ತಿದ್ದಿಲ್ಲ’.</p>.<p>‘ನಿನ್ನ ಪ್ರಕಾರ ಆ ಸಂಖ್ಯೆ ಎಷ್ಟು?’</p>.<p>‘ಎಲ್ಲಾ ಕಸಾಪ ಸದಸ್ಯರೂ ಹೆಬ್ಬೆಟ್ಟುಗಳೇ!’</p>.<p>‘ಇದೇನಪಾ... ಕೆಂಪುಕೋಟೆ ಮೇಲೆ ಧರ್ಮದ ಧ್ವಜ ಹಾರಿಸಿದಂತಿದೆ ನಿನ್ನ ಹೇಳಿಕೆ! ಈ ಸಂಖ್ಯೆಯನ್ನು ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿ ತೆಗೆದುಕೊಂಡೆಯಾ?’</p>.<p>‘ಹಾಗೇ ಅಂದುಕೋ. ಆದರೆ ಅರ್ಜಿಗೆ ಸಹಿ ಹಾಕಿದ್ದೆನೋಹೆಬ್ಬೆಟ್ಟುಒತ್ತಿದ್ದೆನೋ ಅಂತ ಕೆದಕಬೇಡ. ಪರಿಷತ್ತಿನ ಮಾಹಿತಿ ಸಾಹಿತಿಗಳ ಮೂಲಭೂತ ಹಕ್ಕು’.</p>.<p>‘ಹಕ್ಕು ಹೌದು, ಆದರೆ ಅದು ಮೂಲಭೂತ ಹಕ್ಕೋ ಮೂಲಭೂತವಾದದ ಕುಮ್ಮಕ್ಕೋ ನಿರ್ಧರಿಸೋರು ಯಾರು?’</p>.<p>‘ನೀನು ಮೂಲ ವಿಷಯ ಮರೆಮಾಚಿ ಕೋರ್ಟು ಕಟಕಟೆಯಲ್ಲಿ ನಿಲ್ಲಿಸಬೇಡ. ಕಸಾಪ ಸದಸ್ಯರಷ್ಟೇ ಅಲ್ಲ, ಎಲ್ಲ ಚುನಾವಣೆಗಳ ಎಲ್ಲ ಮತದಾರರೂ ಹೆಬ್ಬೆಟ್ಟುಗಳೇ…’</p>.<p>‘ಚುನಾಯಿತ ಪ್ರಜಾಪ್ರತಿನಿಧಿಗಳ ಯೋಗ್ಯತೆ ನೋಡಿದರೆ ಹಾಗೇ ಅನ್ನಿಸುತ್ತದೆ, ನಿಜ. ಆದರೆ ನೀವು ಕವಿಗಳು ಏನೇನೋ ಅರ್ಥ ಅಂಟಿಸಿಬಿಡುತ್ತೀರಿ’.</p>.<p>‘ನನ್ನ ಹೇಳಿಕೆಗೆ ಆಧಾರ್ ಕಾರ್ಡೇ ಆಧಾರ. ಎಲ್ಲ ಕಾರ್ಯಗಳಿಗೂ ಅದೇ ಅಧಿಕೃತ ಗುರುತುಪತ್ರ. ಅದರಲ್ಲಿ ಯಾರ ಸಹಿಯೂ ಇಲ್ಲ.ಹೆಬ್ಬೆಟ್ಟುಮತ್ತದರ ನಾಲ್ವರು ಸೋದರ ಬೆಟ್ಟುಗಳನ್ನು ನಂಬಿ ಮತದಾರರಿಗೆ ಆಧಾರ ಕಲ್ಪಿಸಲಾಗಿದೆ’.</p>.<p>‘ಹಾಗಾದರೆ ಇಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸುತ್ತದೆ. ಹೆಬ್ಬೆಟ್ಟುಗಳ ಮತ ಪಡೆದು ಆರಿಸಿಬಂದವರಿಗೆ ಅದೇ ಹೆಬ್ಬೆಟ್ಟುಗಳ ಬಗ್ಗೆ ಮಾತಾಡುವ ಹಕ್ಕು ಇದೆಯೇ? ಇದ್ದರೆ ಆ ಹಕ್ಕಿನ ರಕ್ಷಣೆ ಹೇಗೆ? ಇಲ್ಲದಿದ್ದರೆ ವಾಕ್ ಸ್ವಾತಂತ್ರ್ಯದ ಹರಣವಾಗುವುದಿಲ್ಲವೇ?’</p>.<p>‘ಆಯ್ತು,ಹೆಬ್ಬೆಟ್ಟುವಿವಾದವನ್ನು ಬಹುಸದಸ್ಯ ಸಂವಿಧಾನ ಪೀಠ ಬಗೆಹರಿಸುವವರೆಗೆ ನಾವೆಲ್ಲಾ ನಿಪ್ಪಟ್ಟು ತಿಂತಿರೋಣ!’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಪರಿಷತ್ತಿನ ಮತದಾರರ ಬಗ್ಗೆ ಸರಿಯಾದ ಮಾಹಿತಿಯಿಲ್ಲ!’ ಬದ್ರಿಯ ಹೇಳಿಕೆ ತಿಂಗಳೇಶನ ಹುಬ್ಬೇರಿಸಿತು.</p>.<p>‘ಅತ್ಯಧಿಕ ಮತ ಪಡೆದು ಆಯ್ಕೆಯಾದ ಅಧ್ಯಕ್ಷರಿಗೇ ಮಾಹಿತಿ ಇಲ್ಲ ಅಂದ್ರೆ ಹೇಗೆ?’</p>.<p>‘ಅವರಿಗೆ ಅಧಿಕೃತ ಮಾಹಿತಿ ಇದ್ದಿದ್ದರೆ ಸಾಹಿತ್ಯ ಪರಿಷತ್ತಿನಲ್ಲಿ ಕೇವಲ ಮೂವತ್ತು ಸಾವಿರ ಹೆಬ್ಬೆಟ್ಟುಗಳು ಇದ್ದಾರೆಂದು ತಪ್ಪು ಮಾಹಿತಿ ನೀಡಿ ಬಂಡಾಯ ಸಾಹಿತಿಗಳ ದಾರಿ ತಪ್ಪಿಸುತ್ತಿದ್ದಿಲ್ಲ’.</p>.<p>‘ನಿನ್ನ ಪ್ರಕಾರ ಆ ಸಂಖ್ಯೆ ಎಷ್ಟು?’</p>.<p>‘ಎಲ್ಲಾ ಕಸಾಪ ಸದಸ್ಯರೂ ಹೆಬ್ಬೆಟ್ಟುಗಳೇ!’</p>.<p>‘ಇದೇನಪಾ... ಕೆಂಪುಕೋಟೆ ಮೇಲೆ ಧರ್ಮದ ಧ್ವಜ ಹಾರಿಸಿದಂತಿದೆ ನಿನ್ನ ಹೇಳಿಕೆ! ಈ ಸಂಖ್ಯೆಯನ್ನು ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿ ತೆಗೆದುಕೊಂಡೆಯಾ?’</p>.<p>‘ಹಾಗೇ ಅಂದುಕೋ. ಆದರೆ ಅರ್ಜಿಗೆ ಸಹಿ ಹಾಕಿದ್ದೆನೋಹೆಬ್ಬೆಟ್ಟುಒತ್ತಿದ್ದೆನೋ ಅಂತ ಕೆದಕಬೇಡ. ಪರಿಷತ್ತಿನ ಮಾಹಿತಿ ಸಾಹಿತಿಗಳ ಮೂಲಭೂತ ಹಕ್ಕು’.</p>.<p>‘ಹಕ್ಕು ಹೌದು, ಆದರೆ ಅದು ಮೂಲಭೂತ ಹಕ್ಕೋ ಮೂಲಭೂತವಾದದ ಕುಮ್ಮಕ್ಕೋ ನಿರ್ಧರಿಸೋರು ಯಾರು?’</p>.<p>‘ನೀನು ಮೂಲ ವಿಷಯ ಮರೆಮಾಚಿ ಕೋರ್ಟು ಕಟಕಟೆಯಲ್ಲಿ ನಿಲ್ಲಿಸಬೇಡ. ಕಸಾಪ ಸದಸ್ಯರಷ್ಟೇ ಅಲ್ಲ, ಎಲ್ಲ ಚುನಾವಣೆಗಳ ಎಲ್ಲ ಮತದಾರರೂ ಹೆಬ್ಬೆಟ್ಟುಗಳೇ…’</p>.<p>‘ಚುನಾಯಿತ ಪ್ರಜಾಪ್ರತಿನಿಧಿಗಳ ಯೋಗ್ಯತೆ ನೋಡಿದರೆ ಹಾಗೇ ಅನ್ನಿಸುತ್ತದೆ, ನಿಜ. ಆದರೆ ನೀವು ಕವಿಗಳು ಏನೇನೋ ಅರ್ಥ ಅಂಟಿಸಿಬಿಡುತ್ತೀರಿ’.</p>.<p>‘ನನ್ನ ಹೇಳಿಕೆಗೆ ಆಧಾರ್ ಕಾರ್ಡೇ ಆಧಾರ. ಎಲ್ಲ ಕಾರ್ಯಗಳಿಗೂ ಅದೇ ಅಧಿಕೃತ ಗುರುತುಪತ್ರ. ಅದರಲ್ಲಿ ಯಾರ ಸಹಿಯೂ ಇಲ್ಲ.ಹೆಬ್ಬೆಟ್ಟುಮತ್ತದರ ನಾಲ್ವರು ಸೋದರ ಬೆಟ್ಟುಗಳನ್ನು ನಂಬಿ ಮತದಾರರಿಗೆ ಆಧಾರ ಕಲ್ಪಿಸಲಾಗಿದೆ’.</p>.<p>‘ಹಾಗಾದರೆ ಇಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸುತ್ತದೆ. ಹೆಬ್ಬೆಟ್ಟುಗಳ ಮತ ಪಡೆದು ಆರಿಸಿಬಂದವರಿಗೆ ಅದೇ ಹೆಬ್ಬೆಟ್ಟುಗಳ ಬಗ್ಗೆ ಮಾತಾಡುವ ಹಕ್ಕು ಇದೆಯೇ? ಇದ್ದರೆ ಆ ಹಕ್ಕಿನ ರಕ್ಷಣೆ ಹೇಗೆ? ಇಲ್ಲದಿದ್ದರೆ ವಾಕ್ ಸ್ವಾತಂತ್ರ್ಯದ ಹರಣವಾಗುವುದಿಲ್ಲವೇ?’</p>.<p>‘ಆಯ್ತು,ಹೆಬ್ಬೆಟ್ಟುವಿವಾದವನ್ನು ಬಹುಸದಸ್ಯ ಸಂವಿಧಾನ ಪೀಠ ಬಗೆಹರಿಸುವವರೆಗೆ ನಾವೆಲ್ಲಾ ನಿಪ್ಪಟ್ಟು ತಿಂತಿರೋಣ!’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>