‘ಹಗಲೆಲ್ಲಾ ಜನಸೇವೆ ಮಾಡಿ ದಣಿದಿರೋ ನಾಯಕರು ಮಿಡ್ನೈಟ್ ಮಸಾಲೆಯಲ್ಲಿ ಹೆಂಗಳವಾದ್ಯಕ್ಕೆ ಮರುಳಾಗಿ ಗಂಡಸ್ತನ ತೋರ್ಸಿ ಮುಗ್ಗುರಿಸಿದ್ದೇ ಹನಿಟ್ರಾಪ್! ಯಾರ್ಯಾರ ಸೌಂದರ್ಯೋಪಾಸನೆ ಎಷ್ಟೆಷ್ಟದೋ ಸಿಸಿಬಿ ಮನ್ಮಥನೇ ಬಲ್ಲ! ಅದೇಥರಾ ಮತದಾರನ್ನ ಓಲೈಸಿ ವೋಟು ಕೆಡವಿಸಿಕ್ಯಳದೇ ರಾಜಕೀಯದ ವೋಟಿಂಗ್ಟ್ರಾಪ್. ಕನಸುಗಾರ ಕುಮಾರಣ್ಣಂದು ಮೈತ್ರಿಟ್ರಾಪ್, ಸಿದ್ದರಾಮಣ್ಣನದು ಕುರ್ಚಿ ಟ್ರಾಪ್, ಯಡುರಪ್ಪಾರದು ಮಿಶನ್ 15 ಟ್ರಾಪ್, ಪುಗಸಟ್ಟೆ ಕಾಲ್ ಮಾಡಿ ಅಂತ ಮೊಬೈಲು ಕೊಟ್ಟು ಆಮೇಲೆ ರೇಟು ಏರಿಸೋ ಮೊಬೈಲ್ ಟ್ರಾಪ್. ಹಿಂಗೇ ಸುಮಾರವೆ ಟ್ರಾಪುಗಳು! ಮಂಡೇದಲ್ಲಿ ನಮ್ಮಾವಂದು ಜೇನುತುಪ್ಪದ ಅಂಗಡಿ ಇತ್ತು. ನನ್ನೆಂಡ್ರು ಗಲ್ಲಾದಲ್ಲಿ ಕುಂತಿರಳು. ಲಚ್ಚರರ್ರಾಗಿದ್ದ ನಾನು ಜೇನುತುಪ್ಪ ತಗಂಡು ತಗಂಡು ಟ್ರಾಪಾದೆ’ ಅಂದರು.