<p>‘ಜಗಜ್ಜನನಿ, ಇದೇನಾಶ್ಚರ್ಯ... ಆಸ್ಥಾನಕ್ಕೆ ನಿಮ್ಮ ಪ್ರವೇಶ’ ನಡು ಬಗ್ಗಿಸಿ, ತಲೆ ತಗ್ಗಿಸಿ ಕೇಳಿದ ಖಜಾನಾಧಿಕಾರಿ.</p>.<p>‘ದೊರೆಯ ದರ್ಬಾರ್ ನೋಡಬೇಕೆಂಬ ಬಯಕೆಯಿಂದ ಖುದ್ದಾಗಿ ಬಂದೆ’ ಹಸನ್ಮುಖದಿ ನುಡಿದಳು ಚಾಮುಂಡೇಶ್ವರಿ.</p>.<p>‘ಎಲ್ಲಿ, ದೊರೆಯೇ ಕಾಣುತ್ತಿಲ್ಲ?’</p>.<p>‘ಅವರು ತಂತಿಯ ಮೇಲೆ ನಡೆಯುತ್ತಿದ್ದಾರೆ ದೇವಿ’.</p>.<p>‘ಕೆಳಗೆ ಕಪ್ಪುಮಣ್ಣಿನ ನಾಡು, ಮೇಲೆ ಸ್ವರ್ಗದಂಥ ಕಾಶ್ಮೀರ ಇದ್ದರೂ, ಅವರೇಕೆ ಮಧ್ಯದ ತಂತಿಯನ್ನು ಆರಿಸಿಕೊಂಡರು’ ಯೋಚನಾಮಗ್ನಳಾಗಿ ಕೇಳಿದಳು ಈಶ್ವರಿ.</p>.<p>‘ಕೆಳಗಿಳಿದರೆ ಪ್ರಜೆಗಳು ಬಿಡುವುದಿಲ್ಲ, ಮೇಲಿರುವ ರಾಜಾಧಿರಾಜ ಸಂಪತ್ತು ಕೊಡುತ್ತಿಲ್ಲ. ಹೀಗಾಗಿ, ತಂತಿಯೇ ಗತಿಯಾಗಿದೆ ಮಾತೆ’.</p>.<p>‘ಆಸ್ಥಾನದ ಮುಖ್ಯ ವಿದ್ವಾಂಸರೆಲ್ಲಿ?’</p>.<p>‘ನಾರಿಗೇಕೆ ಅಯ್ಯಪ್ಪ ದೇಗುಲ ದಾರಿ’ ಎಂಬ ಕಾದಂಬರಿ ಬರೆಯುತ್ತಿರುವುದರಿಂದ ಅವರ ಬರೋಣವಾಗಿಲ್ಲ ದೇವಿ’.</p>.<p>‘ಅಯ್ಯಪ್ಪನೇ ನನ್ನನ್ನು ಪೂಜಿಸಿ ಬೀಳ್ಕೊಟ್ಟನಲ್ಲ. ಅಲ್ಲಿ ವಿದ್ವಾಂಸರು ಕಾಣಲೇ ಇಲ್ಲ’ ಎಂದ ದುರ್ಗೆ, ಮುಂದುವರಿದು ಕೇಳಿದಳು.</p>.<p>‘ಎಲ್ಲಿ ಮಹಿಷಾಸುರ ಕಾಣುತ್ತಿಲ್ಲ. ನನ್ನನ್ನು ನಿಂದಿಸಲು ಈ ವೇಳೆಗಾಗಲೇ ಅವನು ಬರಬೇಕಿತ್ತಲ್ಲವೇ?’</p>.<p>‘ಆ ಅಸುರ ಬರುತ್ತಿದ್ದ ದೇವಿ. ಆದರೆ, ಕೆಲವು ‘ಮಹಿಷ’ಗಳು ಅವನನ್ನು ತಡೆದವು. ಅವನಿಂದ ನಿಮಗೆ ಅವಮಾನವಾಗುತ್ತದಂತೆ’.</p>.<p>‘ಅಯ್ಯೋ, ನಿಮಗೆಲ್ಲ ಏನಾಗಿದೆ? ಮಹಿಷಾಸುರ ಇರದಿದ್ದರೆ ನಾನು ಚಾಮುಂಡಿಯ ಅವತಾರವನ್ನೇ ಎತ್ತಲು ಸಾಧ್ಯವಾಗುತ್ತಿರಲಿಲ್ಲ ಅಲ್ಲವೇ’ ಪ್ರಶ್ನಿಸಿದಳು ಜಗನ್ಮಾತೆ.</p>.<p>‘ಹೋಗಲಿ ಬಿಡಿ, ದೊರೆಯ ಟೀಕಾಕಾರರೂ ಕಾಣುತ್ತಿಲ್ಲವಲ್ಲ’.</p>.<p>‘ದೇವಿ, ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ’.</p>.<p>‘ಮತ್ತೆ, ನೀವೊಬ್ಬರೇ ಇಲ್ಲೇಕೆ ಇದ್ದೀರಿ ಖಜಾನಾಧಿಕಾರಿ?’</p>.<p>‘ಖಜಾನೆ ಖಾಲಿ ಆಗಿದೆ ದೇವಿ, ಬೇರೆ ಕೆಲಸವಿಲ್ಲ’!</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>‘ಜಗಜ್ಜನನಿ, ಇದೇನಾಶ್ಚರ್ಯ... ಆಸ್ಥಾನಕ್ಕೆ ನಿಮ್ಮ ಪ್ರವೇಶ’ ನಡು ಬಗ್ಗಿಸಿ, ತಲೆ ತಗ್ಗಿಸಿ ಕೇಳಿದ ಖಜಾನಾಧಿಕಾರಿ.</p>.<p>‘ದೊರೆಯ ದರ್ಬಾರ್ ನೋಡಬೇಕೆಂಬ ಬಯಕೆಯಿಂದ ಖುದ್ದಾಗಿ ಬಂದೆ’ ಹಸನ್ಮುಖದಿ ನುಡಿದಳು ಚಾಮುಂಡೇಶ್ವರಿ.</p>.<p>‘ಎಲ್ಲಿ, ದೊರೆಯೇ ಕಾಣುತ್ತಿಲ್ಲ?’</p>.<p>‘ಅವರು ತಂತಿಯ ಮೇಲೆ ನಡೆಯುತ್ತಿದ್ದಾರೆ ದೇವಿ’.</p>.<p>‘ಕೆಳಗೆ ಕಪ್ಪುಮಣ್ಣಿನ ನಾಡು, ಮೇಲೆ ಸ್ವರ್ಗದಂಥ ಕಾಶ್ಮೀರ ಇದ್ದರೂ, ಅವರೇಕೆ ಮಧ್ಯದ ತಂತಿಯನ್ನು ಆರಿಸಿಕೊಂಡರು’ ಯೋಚನಾಮಗ್ನಳಾಗಿ ಕೇಳಿದಳು ಈಶ್ವರಿ.</p>.<p>‘ಕೆಳಗಿಳಿದರೆ ಪ್ರಜೆಗಳು ಬಿಡುವುದಿಲ್ಲ, ಮೇಲಿರುವ ರಾಜಾಧಿರಾಜ ಸಂಪತ್ತು ಕೊಡುತ್ತಿಲ್ಲ. ಹೀಗಾಗಿ, ತಂತಿಯೇ ಗತಿಯಾಗಿದೆ ಮಾತೆ’.</p>.<p>‘ಆಸ್ಥಾನದ ಮುಖ್ಯ ವಿದ್ವಾಂಸರೆಲ್ಲಿ?’</p>.<p>‘ನಾರಿಗೇಕೆ ಅಯ್ಯಪ್ಪ ದೇಗುಲ ದಾರಿ’ ಎಂಬ ಕಾದಂಬರಿ ಬರೆಯುತ್ತಿರುವುದರಿಂದ ಅವರ ಬರೋಣವಾಗಿಲ್ಲ ದೇವಿ’.</p>.<p>‘ಅಯ್ಯಪ್ಪನೇ ನನ್ನನ್ನು ಪೂಜಿಸಿ ಬೀಳ್ಕೊಟ್ಟನಲ್ಲ. ಅಲ್ಲಿ ವಿದ್ವಾಂಸರು ಕಾಣಲೇ ಇಲ್ಲ’ ಎಂದ ದುರ್ಗೆ, ಮುಂದುವರಿದು ಕೇಳಿದಳು.</p>.<p>‘ಎಲ್ಲಿ ಮಹಿಷಾಸುರ ಕಾಣುತ್ತಿಲ್ಲ. ನನ್ನನ್ನು ನಿಂದಿಸಲು ಈ ವೇಳೆಗಾಗಲೇ ಅವನು ಬರಬೇಕಿತ್ತಲ್ಲವೇ?’</p>.<p>‘ಆ ಅಸುರ ಬರುತ್ತಿದ್ದ ದೇವಿ. ಆದರೆ, ಕೆಲವು ‘ಮಹಿಷ’ಗಳು ಅವನನ್ನು ತಡೆದವು. ಅವನಿಂದ ನಿಮಗೆ ಅವಮಾನವಾಗುತ್ತದಂತೆ’.</p>.<p>‘ಅಯ್ಯೋ, ನಿಮಗೆಲ್ಲ ಏನಾಗಿದೆ? ಮಹಿಷಾಸುರ ಇರದಿದ್ದರೆ ನಾನು ಚಾಮುಂಡಿಯ ಅವತಾರವನ್ನೇ ಎತ್ತಲು ಸಾಧ್ಯವಾಗುತ್ತಿರಲಿಲ್ಲ ಅಲ್ಲವೇ’ ಪ್ರಶ್ನಿಸಿದಳು ಜಗನ್ಮಾತೆ.</p>.<p>‘ಹೋಗಲಿ ಬಿಡಿ, ದೊರೆಯ ಟೀಕಾಕಾರರೂ ಕಾಣುತ್ತಿಲ್ಲವಲ್ಲ’.</p>.<p>‘ದೇವಿ, ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ’.</p>.<p>‘ಮತ್ತೆ, ನೀವೊಬ್ಬರೇ ಇಲ್ಲೇಕೆ ಇದ್ದೀರಿ ಖಜಾನಾಧಿಕಾರಿ?’</p>.<p>‘ಖಜಾನೆ ಖಾಲಿ ಆಗಿದೆ ದೇವಿ, ಬೇರೆ ಕೆಲಸವಿಲ್ಲ’!</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>