<p>‘ಒಂದ್ ಮಳೆ ಬಂದಿದ್ದೇ ಬೆಂಗಳೂರು– ಮಂಗಳೂರು ಚತುಷ್ಪಥ ರಸ್ತೆ ಕುಸದೈತಂತೆ… ಯಾವ ಸರ್ಕಾರ ಬಂದ್ರು ರಸ್ತೆಗಳ ಹಣೇಬರಹ ಇಷ್ಟೇ’ ಬೆಕ್ಕಣ್ಣ ಹಣೆ ಚಚ್ಚಿಕೊಂಡಿತು.</p><p>‘ಅಯೋಧ್ಯೆವಳಗೆ ಹೊಸದಾಗಿ ಮಾಡಿದ ರಾಮಪಥನೇ ಕುಸಿದೈತಂತೆ… ಇನ್ನು ಇದೇನ್ ಮಹಾ ಬಿಡು’ ಎಂದೆ.</p><p>‘ನೋಡು… ನೀ ಏನರೆ ಮಾತಾಡು, ಏನರೆ ಬರಿ… ಆದರೆ, ರಾಮಪಥದ ಬಗ್ಗೆ ಚಕಾರ ಎತ್ತಬ್ಯಾಡ. ಅದನ್ನೆಲ್ಲ ನೋಡಿಕೊಳ್ಳಾಕೆ ಯೋಗಿಮಾಮಾ ಅದಾನೆ’ ಎಂದು ಬೆಕ್ಕಣ್ಣ ಗುರ್ರೆಂದಿತು.</p><p>‘ಹಂಗಲ್ಲ… ಅಂಥಾ ಪ್ರತಿಷ್ಠಿತ ರಸ್ತೆ ನಿರ್ಮಾಣದಲ್ಲಿಯೇ ಏನೋ ಕಮಿಷನ್ ಕಳ್ಳಾಟ ಮಾಡಿ, ರಸ್ತೆಗೆ ಸರಿಯಾಗಿ ಜಲ್ಲಿ, ಟಾರು ಹಾಕಂಗಿಲ್ಲ. ಇನ್ನು ಈ ಪಾಮರರ ರಸ್ತೆಗಳ ಪಾಡು ಕೇಳೂದೇ ಬ್ಯಾಡ ಅಂತ ನಾ ಹೇಳಿದ್ದು’ ಸಮಾಧಾನಿಸಿದೆ.</p><p>‘ಯೋಗಿಮಾಮಾನ ರಾಜ್ಯದ ಸುದ್ದಿ ನಿಂಗ್ಯಾಕೆ? ಇಲ್ಲಿ ಸಿಎಂ ಯಾರು ಆಗಬಕು, ಡಿಸಿಎಂ ಎಷ್ಟು ಜನ ಆಗಬಕು ಅಂತ ಗುದ್ದಾಟ ನಡದೈತಲ್ಲ ಅದ್ರ ಬಗ್ಗೆ ಮಾತಾಡಿ ಬಾಯಿ ನೋಯಿಸಿಕೋ’.</p><p>‘ಹೋಗ್ಲಿಬಿಡು. ನೋಡಿಲ್ಲಿ… ಚೀನಾದವ್ರು ಚಂದ್ರನ ಮ್ಯಾಗಿಂದ ಎರಡು ಕೆ.ಜಿ. ಮಣ್ಣು ತಂದಾರಂತೆ’, ನಾನು ಮಾತು ಬದಲಿಸಿದೆ.</p><p>‘ಅದೇನ್ ಮಹಾ… ನಮ್ ಇಸ್ರೊದವ್ರು ಇದೇ ವರ್ಷ ಚಂದ್ರಯಾತ್ರೆ– 4 ಮಾಡ್ತಾರಂತೆ. ಮಣ್ಣಲ್ಲ, ಅಲ್ಲಿಂದ ದೊಡ್ಡ ಬಂಡೇನೆ ತರತಾರೆ’ ಬೆಕ್ಕಣ್ಣ ಬಲು ಅಭಿಮಾನದಿಂದ ರಾಕ್ ಸ್ಯಾಂಪಲ್ ತರುವುದಾಗಿ ಇಸ್ರೊ ಅಧ್ಯಕ್ಷರು ಹೇಳಿದ್ದ ಹಳೆಯ ಸುದ್ದಿಯನ್ನು ತೋರಿಸಿತು.</p><p>‘ಮಂಗ್ಯಾನಂಥವ್ನೇ… ಹಂಗೆಲ್ಲ ಅಲ್ಲಿಂದ ದೊಡ್ಡ ಬಂಡೇನೇ ಎತ್ತಿಕೊಂಡು ಬರಾಕೆ ಅಲ್ಲಿಗೆ ಕ್ರೇನ್ ಕಳಿಸಾಕೆ ಹತ್ತಿಲ್ಲ, ಸಣ್ಣ ಬಾಹ್ಯಾಕಾಶ ನೌಕೆ ಕಳಿಸತೀವಿ’.</p><p>‘ಈಗ ನಮ್ ಟೀಂ ಇಂಡಿಯಾದವ್ರು ಟಿ-20 ವಿಶ್ವಕಪ್ ಎತ್ತಾಕಿಕೊಂಡು ಬಂದಿಲ್ವಾ… ಹಂಗೆ ಎತ್ತಾಕಿಕೊಂಡು ಬರದು! ಆಗಲಿಲ್ಲ ಅಂದ್ರೆ ಇಲ್ಲಿಂದ ಕಳಿಸಿರೋ ರೋವರ್ ಚಂದ್ರದಲ್ಲಿರೋ ಬಂಡೆಯನ್ನ ಸರಿಯಾಗಿ ಭೂಮಿ ಮ್ಯಾಗೆ ಬೀಳೂ ಹಂಗೆ ಜೋರಾಗಿ ಈಥರಾ ನೂಕತೈತಿ…’ ಬೆಕ್ಕಣ್ಣ ಹಾವಭಾವದೊಡನೆ ತೋರಿಸಿತು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಒಂದ್ ಮಳೆ ಬಂದಿದ್ದೇ ಬೆಂಗಳೂರು– ಮಂಗಳೂರು ಚತುಷ್ಪಥ ರಸ್ತೆ ಕುಸದೈತಂತೆ… ಯಾವ ಸರ್ಕಾರ ಬಂದ್ರು ರಸ್ತೆಗಳ ಹಣೇಬರಹ ಇಷ್ಟೇ’ ಬೆಕ್ಕಣ್ಣ ಹಣೆ ಚಚ್ಚಿಕೊಂಡಿತು.</p><p>‘ಅಯೋಧ್ಯೆವಳಗೆ ಹೊಸದಾಗಿ ಮಾಡಿದ ರಾಮಪಥನೇ ಕುಸಿದೈತಂತೆ… ಇನ್ನು ಇದೇನ್ ಮಹಾ ಬಿಡು’ ಎಂದೆ.</p><p>‘ನೋಡು… ನೀ ಏನರೆ ಮಾತಾಡು, ಏನರೆ ಬರಿ… ಆದರೆ, ರಾಮಪಥದ ಬಗ್ಗೆ ಚಕಾರ ಎತ್ತಬ್ಯಾಡ. ಅದನ್ನೆಲ್ಲ ನೋಡಿಕೊಳ್ಳಾಕೆ ಯೋಗಿಮಾಮಾ ಅದಾನೆ’ ಎಂದು ಬೆಕ್ಕಣ್ಣ ಗುರ್ರೆಂದಿತು.</p><p>‘ಹಂಗಲ್ಲ… ಅಂಥಾ ಪ್ರತಿಷ್ಠಿತ ರಸ್ತೆ ನಿರ್ಮಾಣದಲ್ಲಿಯೇ ಏನೋ ಕಮಿಷನ್ ಕಳ್ಳಾಟ ಮಾಡಿ, ರಸ್ತೆಗೆ ಸರಿಯಾಗಿ ಜಲ್ಲಿ, ಟಾರು ಹಾಕಂಗಿಲ್ಲ. ಇನ್ನು ಈ ಪಾಮರರ ರಸ್ತೆಗಳ ಪಾಡು ಕೇಳೂದೇ ಬ್ಯಾಡ ಅಂತ ನಾ ಹೇಳಿದ್ದು’ ಸಮಾಧಾನಿಸಿದೆ.</p><p>‘ಯೋಗಿಮಾಮಾನ ರಾಜ್ಯದ ಸುದ್ದಿ ನಿಂಗ್ಯಾಕೆ? ಇಲ್ಲಿ ಸಿಎಂ ಯಾರು ಆಗಬಕು, ಡಿಸಿಎಂ ಎಷ್ಟು ಜನ ಆಗಬಕು ಅಂತ ಗುದ್ದಾಟ ನಡದೈತಲ್ಲ ಅದ್ರ ಬಗ್ಗೆ ಮಾತಾಡಿ ಬಾಯಿ ನೋಯಿಸಿಕೋ’.</p><p>‘ಹೋಗ್ಲಿಬಿಡು. ನೋಡಿಲ್ಲಿ… ಚೀನಾದವ್ರು ಚಂದ್ರನ ಮ್ಯಾಗಿಂದ ಎರಡು ಕೆ.ಜಿ. ಮಣ್ಣು ತಂದಾರಂತೆ’, ನಾನು ಮಾತು ಬದಲಿಸಿದೆ.</p><p>‘ಅದೇನ್ ಮಹಾ… ನಮ್ ಇಸ್ರೊದವ್ರು ಇದೇ ವರ್ಷ ಚಂದ್ರಯಾತ್ರೆ– 4 ಮಾಡ್ತಾರಂತೆ. ಮಣ್ಣಲ್ಲ, ಅಲ್ಲಿಂದ ದೊಡ್ಡ ಬಂಡೇನೆ ತರತಾರೆ’ ಬೆಕ್ಕಣ್ಣ ಬಲು ಅಭಿಮಾನದಿಂದ ರಾಕ್ ಸ್ಯಾಂಪಲ್ ತರುವುದಾಗಿ ಇಸ್ರೊ ಅಧ್ಯಕ್ಷರು ಹೇಳಿದ್ದ ಹಳೆಯ ಸುದ್ದಿಯನ್ನು ತೋರಿಸಿತು.</p><p>‘ಮಂಗ್ಯಾನಂಥವ್ನೇ… ಹಂಗೆಲ್ಲ ಅಲ್ಲಿಂದ ದೊಡ್ಡ ಬಂಡೇನೇ ಎತ್ತಿಕೊಂಡು ಬರಾಕೆ ಅಲ್ಲಿಗೆ ಕ್ರೇನ್ ಕಳಿಸಾಕೆ ಹತ್ತಿಲ್ಲ, ಸಣ್ಣ ಬಾಹ್ಯಾಕಾಶ ನೌಕೆ ಕಳಿಸತೀವಿ’.</p><p>‘ಈಗ ನಮ್ ಟೀಂ ಇಂಡಿಯಾದವ್ರು ಟಿ-20 ವಿಶ್ವಕಪ್ ಎತ್ತಾಕಿಕೊಂಡು ಬಂದಿಲ್ವಾ… ಹಂಗೆ ಎತ್ತಾಕಿಕೊಂಡು ಬರದು! ಆಗಲಿಲ್ಲ ಅಂದ್ರೆ ಇಲ್ಲಿಂದ ಕಳಿಸಿರೋ ರೋವರ್ ಚಂದ್ರದಲ್ಲಿರೋ ಬಂಡೆಯನ್ನ ಸರಿಯಾಗಿ ಭೂಮಿ ಮ್ಯಾಗೆ ಬೀಳೂ ಹಂಗೆ ಜೋರಾಗಿ ಈಥರಾ ನೂಕತೈತಿ…’ ಬೆಕ್ಕಣ್ಣ ಹಾವಭಾವದೊಡನೆ ತೋರಿಸಿತು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>