<p>‘ನೋಡ್ರಿ ಸಾ, ರಾಜಕೀಯದೋವು ‘ನನಗೆ ಟಿಕೇಟು ಸಿಗನಿಲ್ಲ. ಹೋಗ್ಲಿ ಬುಡಿ ಅತ್ತಗೆ, ನನ್ನ ಕಂದನಿಗಾದ್ರೂ ಸೀಟು ಕೊಡಬ್ಯಾಡ್ದಾ? ನಿಮ್ಮ ಸಂತಾನಕ್ಕೆ ಮಾತ್ರ ಹದ್ದುಬಸ್ತು ಮಾಡಿಕ್ಯಂಡುದರಿ’ ಅಂತ ಕಣ್ಣು ಮೆಡ್ಡರಿಸಿಕ್ಯಂದು ಮಲ್ಲಾಗರು ಬಂದಂಗೆ ಕೂಗ್ತಾ ಕೊರಳುಸೇವೆ ಮಾಡ್ತಾ ಅದಾವಲ್ಲ ಸಾ’ ಅಂತ ನೊಂದ್ಕಂದೆ.</p><p>‘ರಾಜಕೀಯದ ಕುಂಡಲಿ ಲೆಕ್ಕಾಚಾರದೇಲಿ ಇವರಿಗೆ, ಇವರ ಮಕ್ಕಳಿಗೆ ಹೆಸರುಬಲ ಬಂದುಲ್ಲ ಕನೋ. ಅದುಕ್ಕೇ ಟಿಕೆಟ್ ಲ್ಯಾಪ್ಸಾದ ದುಃಖದ ಸಿಂಬಳ, ಕಣ್ಣೀರು ಒರೆಸೋರು ಇಲ್ದಂಗಾಗ್ಯದೆ’ ಅಂದ್ರು ತುರೇಮಣೆ.</p><p>‘ಕರೆಟ್ಟು ಕನಣೈ, ರಾಜಕೀಯ ಜೀವನದಲ್ಲಿ ಕಣ್ಣೀರು ಒರೆಸೋರು ಸಿಗಬೈದು, ಆದರೆ ಸಿಂಬಳ ಒರೆಸೋರು ಸಿಕ್ಕಕುಲ್ಲ’ ಚಂದ್ರು ಚಟಾಕಿ ಹಾರಿಸಿದ.</p><p>‘ಯಾರ ಬಾಯಲ್ಲೂ ‘ನನಗ್ಯಾಕೆ ಟಿಕೇಟು. ನಮ್ಮ ಕಾರ್ಯಕರ್ತರಿಗೆ ವೋಟು ಕೊಡಿ’ ಅನ್ನೋ ಮಾತು ಕಡೀಲಿಲ್ಲವಲ್ಲಾ’ ಅಂತಂದೆ.</p><p>‘ವೋಟು ಅಂದ್ರೆ ಏನಂತ ತಿಳಕಂಡಿದ್ದಯ್? ಸ್ವತಂತ್ರ ಭಾರತದ ಪ್ರಜೆಗಳು ತಮ್ಮನ್ನೇ ತಾವು ಮೂರ್ಖರನ್ನಾಗಿ ಮಾಡಿಕೊಂಡು ಶತಮೂರ್ಖರ ಕೈಗೆ ದೇಸದ ಪಾರುಪತ್ಯ ಕೊಡೋ<br>ಪ್ರಜಾಪ್ರಭುತ್ವದ ಹಬ್ಬ ಕಲಾ!’ ಯಂಟಪ್ಪಣ್ಣ ವಿಚಾರ ಮಂಡಿಸಿತು.</p><p>‘ಕುರಿತೇಟಾಗಿ ಹೇಳಿದೆ ಕನಣೈ. ಇದೇ ಐನ್ ಟೇಮು ಅಂತ ಗೆಯ್ಯಕ್ಕೆ ಲಾಯಕ್ಕಿಲ್ಲದ ಹೀನಸುಳಿ, ಪಾತಾಳಸುಳಿ, ದಾವಣಿಸುಳಿ, ಪರಕಲಸುಳಿ, ನಮೂನಿಸುಳಿ, ಸಿಡಗಾಲು, ಕೋರಬಗ್ರಿ, ಕೋವೆಹಲ್ಲಿನ ದನಗಳೆಲ್ಲಾ ಈಗ ಬೀದಿಗೆ ಮೆಯ್ಯಕೆ ಬತ್ತವೆ’ ತುರೇಮಣೆ ಉದ್ಗರಿಸಿದರು.</p><p>‘ಸರಿ ಸಾ, ಈಗ ಎಲ್ಲ ಉಮ್ಮೇದುವಾರರೂ ಏನು ಘನಂದಾರಿ ಕೇಮೆ ಕಿಸಿದವ್ರೆ ಅಂತ ವೋಟು ಕೇಳಕ್ಕೆ ಬತ್ತರೆ?’ ನನ್ನ ಅನುಮಾನ ಕೇಳಿದೆ.</p><p>‘ನಾಯಕರ ಮುಖವಾಡ ಇಕ್ಕ್ಯಂದು ‘ಅಣೈ, ಅಕ್ಕೋ ನಾನು ಇನ್ನೈದು ವರ್ಸ ಇಕ್ಕಡಿಕೆ ತಲೆ ಹಾಕಕುಲ್ಲ. ಇಲ್ಲೀಗಂಟ ನಾನು ಮಾಡಿದ ಗಾಳಿಗಂಟಲು ನಿಮಗಿಷ್ಟ ಆಗಿದ್ರೆ ದಯವಿಟ್ಟು 420420 ನಂಬರಿಗೆ ಎಸ್ಎಂಎಸ್ ಮಾಡಿ’ ಅಂತ ನುಲಿತರೆ ಕನೋ’ ಅಂದ್ರು ತುರೇಮಣೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನೋಡ್ರಿ ಸಾ, ರಾಜಕೀಯದೋವು ‘ನನಗೆ ಟಿಕೇಟು ಸಿಗನಿಲ್ಲ. ಹೋಗ್ಲಿ ಬುಡಿ ಅತ್ತಗೆ, ನನ್ನ ಕಂದನಿಗಾದ್ರೂ ಸೀಟು ಕೊಡಬ್ಯಾಡ್ದಾ? ನಿಮ್ಮ ಸಂತಾನಕ್ಕೆ ಮಾತ್ರ ಹದ್ದುಬಸ್ತು ಮಾಡಿಕ್ಯಂಡುದರಿ’ ಅಂತ ಕಣ್ಣು ಮೆಡ್ಡರಿಸಿಕ್ಯಂದು ಮಲ್ಲಾಗರು ಬಂದಂಗೆ ಕೂಗ್ತಾ ಕೊರಳುಸೇವೆ ಮಾಡ್ತಾ ಅದಾವಲ್ಲ ಸಾ’ ಅಂತ ನೊಂದ್ಕಂದೆ.</p><p>‘ರಾಜಕೀಯದ ಕುಂಡಲಿ ಲೆಕ್ಕಾಚಾರದೇಲಿ ಇವರಿಗೆ, ಇವರ ಮಕ್ಕಳಿಗೆ ಹೆಸರುಬಲ ಬಂದುಲ್ಲ ಕನೋ. ಅದುಕ್ಕೇ ಟಿಕೆಟ್ ಲ್ಯಾಪ್ಸಾದ ದುಃಖದ ಸಿಂಬಳ, ಕಣ್ಣೀರು ಒರೆಸೋರು ಇಲ್ದಂಗಾಗ್ಯದೆ’ ಅಂದ್ರು ತುರೇಮಣೆ.</p><p>‘ಕರೆಟ್ಟು ಕನಣೈ, ರಾಜಕೀಯ ಜೀವನದಲ್ಲಿ ಕಣ್ಣೀರು ಒರೆಸೋರು ಸಿಗಬೈದು, ಆದರೆ ಸಿಂಬಳ ಒರೆಸೋರು ಸಿಕ್ಕಕುಲ್ಲ’ ಚಂದ್ರು ಚಟಾಕಿ ಹಾರಿಸಿದ.</p><p>‘ಯಾರ ಬಾಯಲ್ಲೂ ‘ನನಗ್ಯಾಕೆ ಟಿಕೇಟು. ನಮ್ಮ ಕಾರ್ಯಕರ್ತರಿಗೆ ವೋಟು ಕೊಡಿ’ ಅನ್ನೋ ಮಾತು ಕಡೀಲಿಲ್ಲವಲ್ಲಾ’ ಅಂತಂದೆ.</p><p>‘ವೋಟು ಅಂದ್ರೆ ಏನಂತ ತಿಳಕಂಡಿದ್ದಯ್? ಸ್ವತಂತ್ರ ಭಾರತದ ಪ್ರಜೆಗಳು ತಮ್ಮನ್ನೇ ತಾವು ಮೂರ್ಖರನ್ನಾಗಿ ಮಾಡಿಕೊಂಡು ಶತಮೂರ್ಖರ ಕೈಗೆ ದೇಸದ ಪಾರುಪತ್ಯ ಕೊಡೋ<br>ಪ್ರಜಾಪ್ರಭುತ್ವದ ಹಬ್ಬ ಕಲಾ!’ ಯಂಟಪ್ಪಣ್ಣ ವಿಚಾರ ಮಂಡಿಸಿತು.</p><p>‘ಕುರಿತೇಟಾಗಿ ಹೇಳಿದೆ ಕನಣೈ. ಇದೇ ಐನ್ ಟೇಮು ಅಂತ ಗೆಯ್ಯಕ್ಕೆ ಲಾಯಕ್ಕಿಲ್ಲದ ಹೀನಸುಳಿ, ಪಾತಾಳಸುಳಿ, ದಾವಣಿಸುಳಿ, ಪರಕಲಸುಳಿ, ನಮೂನಿಸುಳಿ, ಸಿಡಗಾಲು, ಕೋರಬಗ್ರಿ, ಕೋವೆಹಲ್ಲಿನ ದನಗಳೆಲ್ಲಾ ಈಗ ಬೀದಿಗೆ ಮೆಯ್ಯಕೆ ಬತ್ತವೆ’ ತುರೇಮಣೆ ಉದ್ಗರಿಸಿದರು.</p><p>‘ಸರಿ ಸಾ, ಈಗ ಎಲ್ಲ ಉಮ್ಮೇದುವಾರರೂ ಏನು ಘನಂದಾರಿ ಕೇಮೆ ಕಿಸಿದವ್ರೆ ಅಂತ ವೋಟು ಕೇಳಕ್ಕೆ ಬತ್ತರೆ?’ ನನ್ನ ಅನುಮಾನ ಕೇಳಿದೆ.</p><p>‘ನಾಯಕರ ಮುಖವಾಡ ಇಕ್ಕ್ಯಂದು ‘ಅಣೈ, ಅಕ್ಕೋ ನಾನು ಇನ್ನೈದು ವರ್ಸ ಇಕ್ಕಡಿಕೆ ತಲೆ ಹಾಕಕುಲ್ಲ. ಇಲ್ಲೀಗಂಟ ನಾನು ಮಾಡಿದ ಗಾಳಿಗಂಟಲು ನಿಮಗಿಷ್ಟ ಆಗಿದ್ರೆ ದಯವಿಟ್ಟು 420420 ನಂಬರಿಗೆ ಎಸ್ಎಂಎಸ್ ಮಾಡಿ’ ಅಂತ ನುಲಿತರೆ ಕನೋ’ ಅಂದ್ರು ತುರೇಮಣೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>