<p>ಶಿರಾ ಪ್ರಾಂತದ ಉಸ್ತುವಾರಿ ವಹಿಸಿದ್ದ ಯುವರಾಜಾ ಹುಲಿ ರಾಜರು, ಪ್ರಾಂತವನ್ನು ಗೆಲ್ಲಿಸಿ ವಿಜಯಪತಾಕೆ ಹಾರಿಸಿದ ಬಳಿಕ ಜಯಘೋಷದೊಂದಿಗೆ ಆಗಮಿಸಿದರು.</p>.<p>‘ಪಿತಾಶ್ರೀಯವರಿಗೆ ಶಿರಸಾಷ್ಟಾಂಗ ಪ್ರಣಾಮಗಳು, ಶಿರಾ ಪ್ರಾಂತವನ್ನು ಒಪ್ಪಿಸಿಕೊಳ್ಳಬೇಕು’ ಎಂದು ರಾಜಾಹುಲಿ ಮಹಾರಾಜರಿಗೆ ಹೇಳಿದರು.</p>.<p>‘ಭಲೇ ಕುಮಾರ, ಶಿರಾದ ಬರಡು ನೆಲದಲ್ಲಿ ಕೆಸರು ಸೃಷ್ಟಿಸಿ, ಕೆಸರಿನಲ್ಲಿ ಕಮಲ ಅರಳಿಸಿದ ನಿನ್ನ ಪರಾಕ್ರಮ ಮೆಚ್ಚಿದೆ’ ಎಂದರು ರಾಜಾಹುಲಿ.</p>.<p>‘ಶಿರಾ ಸಮರದ ಉಸ್ತುವಾರಿ ದಂಡನಾಯಕನಾಗಿ ರಣರಂಗದಲ್ಲಿ ಸರ್ವಾಸ್ತ್ರಗಳನ್ನೂ ಪ್ರಯೋಗಿಸಿ ಶತ್ರುಗಳನ್ನು ಸದೆಬಡಿದೆ ಪಿತಾಶ್ರೀ’.</p>.<p>‘ಮಾಜಿ ಮಹಾರಾಜರಾದ ಸಿದ್ದರಾಮಪ್ರಭು, ಕುಮಾರದೇವರ ಪುತ್ರರೂ ಶಸ್ತ್ರಸಜ್ಜಿತರಾಗಿ ರಣಕಣಕ್ಕೆ ಇಳಿದಿದ್ದರು ಅಲ್ಲವೇ?’</p>.<p>‘ಹೌದು ಜನಕ, ಅವರನ್ನು ಕಣದಿಂದ ಹಿಮ್ಮೆಟ್ಟಿಸಿ ಶಿರಾದಲ್ಲಿ ಕಮಲ ಪತಾಕೆ ಹಾರಿಸಿದೆ’.</p>.<p>‘ಭೇಷ್ ಸುಪುತ್ರ, ಮುಂಬರುವ ಮಹಾ ಸಮರದ ನೇತೃತ್ವ ವಹಿಸಿಕೊಳ್ಳುವ ಸಂದರ್ಭ ಬರಬಹುದು ಸಿದ್ಧನಾಗಿರು. ನಿನ್ನ ಭವಿಷ್ಯ ಉಜ್ವಲವಾಗಲಿ...’ ಎಂದು ಆಶೀರ್ವದಿಸಿದರು.</p>.<p>ಯುವರಾಜಾ ಹುಲಿಯ ನಿರ್ಗಮನದ ನಂತರ, ‘ಮಂತ್ರಿಗಳೇ, ನಮ್ಮ ಯುವರಾಜರು ಸಮರ ಕಲೆಯಲ್ಲಿ ಪ್ರಾವೀಣ್ಯ ಪಡೆದಿದ್ದಾರಲ್ಲವೇ?’ ಸಂತಸ, ಹೆಮ್ಮೆಯಿಂದ ಬೀಗಿದರು ರಾಜಾಹುಲಿ.</p>.<p>‘ಎಷ್ಟಾದರೂ ತಮ್ಮ ಪುತ್ರರಲ್ಲವೇ, ರಾಜಾಹುಲಿ ಹೊಟ್ಟೆಯಲ್ಲಿ ಯುವರಾಜಾ ಹುಲಿ ತಾನೇ ಹುಟ್ಟುವುದು, ಹೆಹ್ಹೆಹ್ಹೆ...’</p>.<p>‘ಶಿರಾವನ್ನು ಗೆದ್ದು ನಾವು ಶಿರ ಎತ್ತುವಂತೆ ಮಾಡಿದ ನಮ್ಮ ಯುವರಾಜರಿಗೆ ಯಾವ ಬಹುಮಾನ ನೀಡೋಣ?’</p>.<p>‘ಪ್ರಭು, ನನ್ನದೊಂದು ಸಲಹೆ... ಹೇಗೂ ತಮಗೆ ವಯೋಮಿತಿ ಮೀರಿದೆ. ತಮ್ಮ ಕುಮಾರರಿಗೆ ರಾಜ್ಯ ವಹಿಸಿ, ತಾವು ವಿಶ್ರಾಂತಿಗೆ ತೆರಳಲು ಇದು ಸೂಕ್ತ ಸಮಯ...’</p>.<p>ಕೆರಳಿದ ರಾಜಾಹುಲಿ ಮಹಾರಾಜರು, ‘ಮಂತ್ರಿಗಳೇ, ಅಧಿಕಪ್ರಸಂಗತನ ಬೇಡ, ಇಲ್ಲಿಂದ ಹೊರಡಿ...’ ಎಂದು ಗರ್ಜಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಶಿರಾ ಪ್ರಾಂತದ ಉಸ್ತುವಾರಿ ವಹಿಸಿದ್ದ ಯುವರಾಜಾ ಹುಲಿ ರಾಜರು, ಪ್ರಾಂತವನ್ನು ಗೆಲ್ಲಿಸಿ ವಿಜಯಪತಾಕೆ ಹಾರಿಸಿದ ಬಳಿಕ ಜಯಘೋಷದೊಂದಿಗೆ ಆಗಮಿಸಿದರು.</p>.<p>‘ಪಿತಾಶ್ರೀಯವರಿಗೆ ಶಿರಸಾಷ್ಟಾಂಗ ಪ್ರಣಾಮಗಳು, ಶಿರಾ ಪ್ರಾಂತವನ್ನು ಒಪ್ಪಿಸಿಕೊಳ್ಳಬೇಕು’ ಎಂದು ರಾಜಾಹುಲಿ ಮಹಾರಾಜರಿಗೆ ಹೇಳಿದರು.</p>.<p>‘ಭಲೇ ಕುಮಾರ, ಶಿರಾದ ಬರಡು ನೆಲದಲ್ಲಿ ಕೆಸರು ಸೃಷ್ಟಿಸಿ, ಕೆಸರಿನಲ್ಲಿ ಕಮಲ ಅರಳಿಸಿದ ನಿನ್ನ ಪರಾಕ್ರಮ ಮೆಚ್ಚಿದೆ’ ಎಂದರು ರಾಜಾಹುಲಿ.</p>.<p>‘ಶಿರಾ ಸಮರದ ಉಸ್ತುವಾರಿ ದಂಡನಾಯಕನಾಗಿ ರಣರಂಗದಲ್ಲಿ ಸರ್ವಾಸ್ತ್ರಗಳನ್ನೂ ಪ್ರಯೋಗಿಸಿ ಶತ್ರುಗಳನ್ನು ಸದೆಬಡಿದೆ ಪಿತಾಶ್ರೀ’.</p>.<p>‘ಮಾಜಿ ಮಹಾರಾಜರಾದ ಸಿದ್ದರಾಮಪ್ರಭು, ಕುಮಾರದೇವರ ಪುತ್ರರೂ ಶಸ್ತ್ರಸಜ್ಜಿತರಾಗಿ ರಣಕಣಕ್ಕೆ ಇಳಿದಿದ್ದರು ಅಲ್ಲವೇ?’</p>.<p>‘ಹೌದು ಜನಕ, ಅವರನ್ನು ಕಣದಿಂದ ಹಿಮ್ಮೆಟ್ಟಿಸಿ ಶಿರಾದಲ್ಲಿ ಕಮಲ ಪತಾಕೆ ಹಾರಿಸಿದೆ’.</p>.<p>‘ಭೇಷ್ ಸುಪುತ್ರ, ಮುಂಬರುವ ಮಹಾ ಸಮರದ ನೇತೃತ್ವ ವಹಿಸಿಕೊಳ್ಳುವ ಸಂದರ್ಭ ಬರಬಹುದು ಸಿದ್ಧನಾಗಿರು. ನಿನ್ನ ಭವಿಷ್ಯ ಉಜ್ವಲವಾಗಲಿ...’ ಎಂದು ಆಶೀರ್ವದಿಸಿದರು.</p>.<p>ಯುವರಾಜಾ ಹುಲಿಯ ನಿರ್ಗಮನದ ನಂತರ, ‘ಮಂತ್ರಿಗಳೇ, ನಮ್ಮ ಯುವರಾಜರು ಸಮರ ಕಲೆಯಲ್ಲಿ ಪ್ರಾವೀಣ್ಯ ಪಡೆದಿದ್ದಾರಲ್ಲವೇ?’ ಸಂತಸ, ಹೆಮ್ಮೆಯಿಂದ ಬೀಗಿದರು ರಾಜಾಹುಲಿ.</p>.<p>‘ಎಷ್ಟಾದರೂ ತಮ್ಮ ಪುತ್ರರಲ್ಲವೇ, ರಾಜಾಹುಲಿ ಹೊಟ್ಟೆಯಲ್ಲಿ ಯುವರಾಜಾ ಹುಲಿ ತಾನೇ ಹುಟ್ಟುವುದು, ಹೆಹ್ಹೆಹ್ಹೆ...’</p>.<p>‘ಶಿರಾವನ್ನು ಗೆದ್ದು ನಾವು ಶಿರ ಎತ್ತುವಂತೆ ಮಾಡಿದ ನಮ್ಮ ಯುವರಾಜರಿಗೆ ಯಾವ ಬಹುಮಾನ ನೀಡೋಣ?’</p>.<p>‘ಪ್ರಭು, ನನ್ನದೊಂದು ಸಲಹೆ... ಹೇಗೂ ತಮಗೆ ವಯೋಮಿತಿ ಮೀರಿದೆ. ತಮ್ಮ ಕುಮಾರರಿಗೆ ರಾಜ್ಯ ವಹಿಸಿ, ತಾವು ವಿಶ್ರಾಂತಿಗೆ ತೆರಳಲು ಇದು ಸೂಕ್ತ ಸಮಯ...’</p>.<p>ಕೆರಳಿದ ರಾಜಾಹುಲಿ ಮಹಾರಾಜರು, ‘ಮಂತ್ರಿಗಳೇ, ಅಧಿಕಪ್ರಸಂಗತನ ಬೇಡ, ಇಲ್ಲಿಂದ ಹೊರಡಿ...’ ಎಂದು ಗರ್ಜಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>