ನವದೆಹಲಿ, ಅ. 3– ಮಹಾತ್ಮ ಗಾಂಧಿ ಮತ್ತು ಅವರ ಪ್ರಿಯ ಅನುಯಾಯಿ ಖಾನ್ ಅಬ್ದುಲ್ ಗಫಾರ್ ಖಾನ್ರು ತೋರಿದ ಪ್ರೀತಿ ಮತ್ತು ಐಕಮತ್ಯದ ಮಾರ್ಗವನ್ನು ಜನತೆ ಅನುಸರಿಸಿದರೆ ಮಾತ್ರ ಭಾರತ ಪ್ರಗತಿ ಹೊಂದುವುದು ಸಾಧ್ಯ ಎಂದು ರಾಷ್ಟ್ರಪತಿ ಶ್ರೀ ವಿ.ವಿ. ಗಿರಿ ಮತ್ತು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ಒತ್ತಿ ಹೇಳಿದರು.