ಪ್ರತ್ಯೇಕ ತೆಲಂಗಾಣ: ಬೇಡಿಕೆ ಈಡೇರದಿದ್ದರೆ ಭಾರಿ ಗಲಭೆ, ಗೊಂದಲ
ಹೈದರಾಬಾದ್, ಫೆ. 22: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಬೇಡಿಕೆಯನ್ನು ಕೇಂದ್ರ ಸರಕಾರ ಅಲಕ್ಷಿಸುತ್ತಾ ಹೋದರೆ, ತೆಲಂಗಾಣ ಜನರು ಯಾರಿಂದಲೂ ಹತೋಟಿಗೆ ತರಲು ಸಾಧ್ಯವಾಗದಂತಹ ಭಾರಿ ಗಲಭೆ, ಗೊಂದಲವನ್ನುಂಟುಮಾಡುವರು ಎಂದು ತೆಲಂಗಾಣ ಪ್ರಜಾ ಸಮಿತಿ ಅಧ್ಯಕ್ಷ ಡಾ.ಎಂ.ಚೆನ್ನಾರೆಡ್ಡಿ ಇಂದು ಇಲ್ಲಿ ಎಚ್ಚರಿಸಿದರು.