ರಾಜ್ಯಸಭೆ ಚುನಾವಣೆ: ಹಣದ ಕೈವಾಡದ ನಿರ್ದಿಷ್ಟ ದೂರು ಬಂದರೆ ತನಿಖೆನವದೆಹಲಿ, ಏ.4– ಇತ್ತೀಚೆಗೆ ರಾಜ್ಯಸಭೆಗೆ ನಡೆದ ದ್ವೈವಾರ್ಷಿಕ ಚುನಾವಣೆಗಳಲ್ಲಿ ‘ಹಣದ ಕೈವಾಡ’ವಿದೆಯೆಂಬ ಬಗ್ಗೆ ನಿರ್ದಿಷ್ಟ ಪ್ರಕರಣಗಳನ್ನು ಸರಕಾರದ ಗಮನಕ್ಕೆ ತಂದರೆ ಅದನ್ನು ತನಿಖೆ ಮಾಡಲಾಗುವುದೆಂದು ಕೇಂದ್ರ ಕಾನೂನು ಖಾತೆ ಸಚಿವ ಶ್ರೀ ಪಿ. ಗೋವಿಂದ ಮೆನನ್ ಅವರು ಇಂದು ರಾಜ್ಯಸಭೆಗೆ ಭರವಸೆ ನೀಡಿದರು.