ಹಿಡುವಳಿ ಖೋತಾ ಭೂಮಿ ಕಿತ್ತುಕೊಳ್ಳಲು ಪ್ರಥಮ ಹೆಜ್ಜೆ– ಮಸಾನಿ
ಬೆಂಗಳೂರು, ಅ. 18– ಭೂ ಹಿಡುವಳಿಯ ಪ್ರಮಾಣವನ್ನು ಈಗಿರುವುದಕ್ಕಿಂತ ಕಡಿಮೆ ಮಾಡುವುದು ‘ಭೂಮಿಯನ್ನು ರೈತರಿಂದ ಕಿತ್ತುಕೊಳ್ಳುವುದರತ್ತ ಪ್ರಥಮ ಹೆಜ್ಜೆ’ ಎಂದು ಸ್ವತಂತ್ರ ಪಕ್ಷದ ಅಧ್ಯಕ್ಷ ಶ್ರೀ ಎಂ.ಆರ್. ಮಸಾನಿಯವರು ಇಂದು ಇಲ್ಲಿ ಎಚ್ಚರಿಸಿದರು.
ಹಿಡುವಳಿಯ ಪ್ರಮಾಣವನ್ನು ಕಡಿಮೆ ಮಾಡಿದರೆ ಕೃಷಿ ಉತ್ಪನ್ನ ಕಡಿಮೆಯಾಗಿ ಆಹಾರವಿಲ್ಲದೆ ಜನ ಹಸಿವಿನಿಂದ ನರಳಬೇಕಾದೀತು ಎಂದರು.
ರಾಜ್ಯಕ್ಕಿಂತ ಕೇಂದ್ರ ಬಲವಾಗುವುದಕ್ಕೆ ಮಸಾನಿ ವಿರೋಧ
ಬೆಂಗಳೂರು, ಅ. 18– ರಾಜ್ಯಗಳು ದುರ್ಬಲಗೊಂಡು ಕೇಂದ್ರ ಶಕ್ತಿಯುತವಾಗು ವುದನ್ನು ಸ್ವತಂತ್ರ ಪಕ್ಷದ ಅಧ್ಯಕ್ಷ ಶ್ರೀ ಎಂ.ಆರ್. ಮಸಾನಿಯವರು ವಿರೋಧಿಸಿದ್ದಾರೆ.
‘ರಾಜ್ಯಗಳು ಬಲವಾಗಿರದಿದ್ದರೆ ಕೇಂದ್ರ ಸರ್ವಾಧಿಕಾರಿಯಾಗುತ್ತೆ’ ಎಂದು ಹೇಳಿ ‘ಈಗಾಗಲೇ ದೆಹಲಿಯಲ್ಲಿ ಕಂಡು ಬರುತ್ತಿರುವ ಸರ್ವಾಧಿಕಾರ ಪ್ರವೃತ್ತಿ’ ಬಗ್ಗೆ ಎಚ್ಚರಿಸಿದರು.