ನವದೆಹಲಿ, ಅ. 14– ಚಂಡೀಗಡ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ರಾಷ್ಟ್ರದ ಹಿತದೃಷ್ಟಿಯ ವಿಶಾಲ ಹಿನ್ನೆಲೆಯಲ್ಲಿ ಪರಿಶೀಲಿಸುವ ಭರವಸೆಯನ್ನು ಉಪವಾಸ ಹೂಡಿರುವ ದರ್ಶನ್ಸಿಂಗ್ ಫೆರುಮಾನರಿಗೆ ಪ್ರಧಾನಿ ಯವರಿತ್ತಿದ್ದಾರೆ. ಪಂಜಾಬ್ ಹಾಗೂ ಹರಿಯಾಣದಲ್ಲಿರುವ ಸೋದರರಿಗೆ ತೃಪ್ತಿ ಯನ್ನುಂಟು ಮಾಡುವ ಪರಿಹಾರವನ್ನು ಹುಡುಕುವ ಅಗತ್ಯವಿದೆ ಎಂದು ಫೆರುಮಾನರಿಗೆ ಪ್ರಧಾನಿ ಪತ್ರ ಬರೆದಿದ್ದಾರೆ.