ಏಕತೆ ಸಾಧಿಸುವ ಮುಖ್ಯಮಂತ್ರಿಗಳ ಪ್ರಯತ್ನ ವಿಫಲ
ನವದೆಹಲಿ, ನ. 11– ಕಾಂಗ್ರೆಸ್ ಪಕ್ಷದಲ್ಲಿ ಐಕಮತ್ಯ ಸಾಧಿಸಲು ಸಭೆ ಸೇರಿದ್ದ ಮುಖ್ಯಮಂತ್ರಿಗಳು ಏಳು ಗಂಟೆಗಳ ಸತತ ಚರ್ಚೆಯ ನಂತರ ಯಾವುದೇ ರಾಜಿ ಸೂತ್ರವನ್ನು ಕಂಡುಹಿಡಿಯಲು ವಿಫಲರಾದರು. ಸಭೆಯ ಬಳಿಕ ರಾಜಸ್ತಾನ ಮುಖ್ಯಮಂತ್ರಿ ಮೋಹನಲಾಲ್ ಸುಖಾಡಿಯಾ ಸುದ್ದಿಗಾರರೊಂದಿಗೆ ಮಾತನಾಡಿ, ‘ದುರದೃಷ್ಟವಶಾತ್ ಇದುವರೆಗೆ ಯಾವ ಸೂತ್ರವನ್ನೂ ರೂಪಿಸಲಾಗಿಲ್ಲ’ ಎಂದರು.