<p><strong>ಹಿಮಾಚಲ ಪ್ರದೇಶಕ್ಕೆ ರಾಜ್ಯ ಸ್ಥಾನಮಾನ: ಕೇಂದ್ರ ನಿರ್ಧಾರ</strong></p>.<p>ನವದೆಹಲಿ, ಜುಲೈ 31– ಹಿಮಾಚಲ ಪ್ರದೇಶಕ್ಕೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಲೋಕಸಭೆಗೆ ತಿಳಿಸಿದರು.</p>.<p>ಹಿಮಾಚಲ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ನೀಡುವ ಬಗ್ಗೆ ಮಸೂದೆಯನ್ನು ಆದಷ್ಟು ಶೀಘ್ರವೇ ಸಂಸತ್ತಿನಲ್ಲಿ ಮಂಡಿಸಲಾಗುವುದೆಂದೂ ಅವರು ನುಡಿದರು.</p>.<p>ಈ ಪ್ರಕಟಣೆ ಬಗ್ಗೆ ಹಿಮಾಚಲ ಪ್ರದೇಶದ ಸದಸ್ಯರು ಹರ್ಷೋದ್ಗಾರ ಮಾಡಿದರೆ ‘ಮಣಿಪುರದ ಗತಿ ಏನು’ ಎಂದು ಸಭೆಯ ಗುಂಪೊಂದು ಕೂಗಿ ಕೇಳಿತು.</p>.<p><strong>ಕಾಲೇಜು, ತಾಂತ್ರಿಕ ಶಿಕ್ಷಣ ಇಲಾಖೆ ಶಿಕ್ಷಕರ ನಿವೃತ್ತಿ ವಯಸ್ಸು 58</strong></p>.<p>ಬೆಂಗಳೂರು ಜುಲೈ 31– ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳ ಶಿಕ್ಷಕರ ನಿವೃತ್ತಿ ವಯಸ್ಸನ್ನು 55 ವರ್ಷದಿಂದ 58 ವರ್ಷಕ್ಕೆ ಹೆಚ್ಚಿಸಲಾಗಿದೆ.</p>.<p>ಈ ಆಜ್ಞೆಯನ್ನು 1970ರ ಜುಲೈ 10ರಂದು ಹೊರಡಿಸಲಾಗಿದ್ದು, ಅಂದಿನಿಂದೀಚೆಗೆ ನಿವೃತ್ತರಾಗುವವರಿಗೆ ಅನ್ವಯಿಸುತ್ತದೆ.</p>.<p>ಶಿಕ್ಷಕರಲ್ಲದ ಬೇರೆ ಹುದ್ದೆಗಳಿಗೆ ಬಡ್ತಿಯನ್ನು ಒಪ್ಪಿಕೊಂಡ ಕೂಡಲೇ ಇದು ಅನ್ವಯವಾಗುವುದು ನಿಂತುಹೋಗುತ್ತದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಹಿಮಾಚಲ ಪ್ರದೇಶಕ್ಕೆ ರಾಜ್ಯ ಸ್ಥಾನಮಾನ: ಕೇಂದ್ರ ನಿರ್ಧಾರ</strong></p>.<p>ನವದೆಹಲಿ, ಜುಲೈ 31– ಹಿಮಾಚಲ ಪ್ರದೇಶಕ್ಕೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಲೋಕಸಭೆಗೆ ತಿಳಿಸಿದರು.</p>.<p>ಹಿಮಾಚಲ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ನೀಡುವ ಬಗ್ಗೆ ಮಸೂದೆಯನ್ನು ಆದಷ್ಟು ಶೀಘ್ರವೇ ಸಂಸತ್ತಿನಲ್ಲಿ ಮಂಡಿಸಲಾಗುವುದೆಂದೂ ಅವರು ನುಡಿದರು.</p>.<p>ಈ ಪ್ರಕಟಣೆ ಬಗ್ಗೆ ಹಿಮಾಚಲ ಪ್ರದೇಶದ ಸದಸ್ಯರು ಹರ್ಷೋದ್ಗಾರ ಮಾಡಿದರೆ ‘ಮಣಿಪುರದ ಗತಿ ಏನು’ ಎಂದು ಸಭೆಯ ಗುಂಪೊಂದು ಕೂಗಿ ಕೇಳಿತು.</p>.<p><strong>ಕಾಲೇಜು, ತಾಂತ್ರಿಕ ಶಿಕ್ಷಣ ಇಲಾಖೆ ಶಿಕ್ಷಕರ ನಿವೃತ್ತಿ ವಯಸ್ಸು 58</strong></p>.<p>ಬೆಂಗಳೂರು ಜುಲೈ 31– ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳ ಶಿಕ್ಷಕರ ನಿವೃತ್ತಿ ವಯಸ್ಸನ್ನು 55 ವರ್ಷದಿಂದ 58 ವರ್ಷಕ್ಕೆ ಹೆಚ್ಚಿಸಲಾಗಿದೆ.</p>.<p>ಈ ಆಜ್ಞೆಯನ್ನು 1970ರ ಜುಲೈ 10ರಂದು ಹೊರಡಿಸಲಾಗಿದ್ದು, ಅಂದಿನಿಂದೀಚೆಗೆ ನಿವೃತ್ತರಾಗುವವರಿಗೆ ಅನ್ವಯಿಸುತ್ತದೆ.</p>.<p>ಶಿಕ್ಷಕರಲ್ಲದ ಬೇರೆ ಹುದ್ದೆಗಳಿಗೆ ಬಡ್ತಿಯನ್ನು ಒಪ್ಪಿಕೊಂಡ ಕೂಡಲೇ ಇದು ಅನ್ವಯವಾಗುವುದು ನಿಂತುಹೋಗುತ್ತದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>