ನವದೆಹಲಿ, ಜೂನ್ 19– ತೆಲಂಗಾಣ ಸಮಸ್ಯೆ ಕುರಿತು ಅಭಿಪ್ರಾಯಗಳನ್ನು ತಿಳಿಸಲು ಮಾತುಕತೆಗಾಗಿ ದೆಹಲಿಗೆ ಬರುವಂತೆ ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ನೀಡಿದ್ದ ಆಮಂತ್ರಣವನ್ನು ತೆಲಂಗಾಣ ಚಳವಳಿಯ ಇಬ್ಬರು ಪ್ರಮುಖ ನಾಯಕರಾದ ಡಾ. ಎಂ. ಚೆನ್ನಾರೆಡ್ಡಿ ಮತ್ತು ಕೊಂಡಾ ಲಕ್ಷ್ಮಣ್ ಬಾಪೂಜಿ ಅವರು ತಿರಸ್ಕರಿಸಿದ್ದಾರೆ.