ಬೆಂಗಳೂರು, ಫೆ. 12: ಕಾಫಿ ಕ್ಯೂರಿಂಗ್ ವರ್ಕ್ಸ್ಗಳಲ್ಲಿ ನಾನಾ ಬಗೆಯ ಕೆಲಸಗಾರರಿಗೆ ಕನಿಷ್ಠ ವೇತನಗಳನ್ನು ನಿಗದಿ ಮಾಡುವ ಬಗ್ಗೆ ಶಿಫಾರಸು ಸಲ್ಲಿಸಲು ಹಾಸನದ ಅಡ್ವೊಕೇಟ್ ಶ್ರೀ ಜಿ.ಎ. ತಿಮ್ಮಪ್ಪಗೌಡರ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಚಿಕ್ಕಮಗಳೂರಿನ ಅಸಿಸ್ಟೆಂಟ್ ಲೇಬರ್ ಕಮಿಷನರ್ ಶ್ರೀ ಎಸ್.ಆರ್. ಮಲ್ಲಿಕಾರ್ಜುನ್ ಅವರು ಕಾರ್ಯದರ್ಶಿಯಾಗಿರುವ ಸಮಿತಿಯ ಅಧಿಕಾರಾವಧಿ ಆರು ತಿಂಗಳು ಮಾತ್ರ.