ನವದೆಹಲಿ, ಏ. 29– ತಮ್ಮ ಬಜೆಟ್ ಸಲಹೆಗಳ ಬಗ್ಗೆ ಕಾಂಗ್ರೆಸ್ ಪಕ್ಷದೊಳಗಡೆಯಲ್ಲಿ ಹಾಗೂ ಹೊರಗಡೆ ಟೀಕಿಸಿದವರಿಗೆ ಮಣಿದ ಕೇಂದ್ರ ಹಣಕಾಸು ಮಂತ್ರಿ ಹಾಗೂ ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ಕೃಷಿಕರಿಗೆ ಅನೇಕ ರಿಯಾಯಿತಿಗಳನ್ನು ಇಂದು ಲೋಕಸಭೆಯಲ್ಲಿ ಪ್ರಕಟಿಸಿದರು. ಒಟ್ಟು 5.09 ಕೋಟಿ ರೂಪಾಯಿಗಳಷ್ಟು ರಿಯಾಯಿತಿಗಳನ್ನು ನೀಡಲಾಗಿದೆ.