ಬೆಳಗಾವಿಯನ್ನು ಎರಡಾಗಿ ವಿಂಗಡಿಸಲು ಅಲ್ಲಿರುವ ರೈಲ್ವೆ ಮಾರ್ಗವನ್ನು ವಿಭಜನಾ ರೇಖೆಯನ್ನಾಗಿ ಪರಿಗಣಿಸಲಾಗುವುದು. ಈಗಿನ ಸೂಚನೆಯಂತೆ ಬೆಳಗಾವಿ ನಗರ ಮಹಾರಾಷ್ಟ್ರದ ಪಾಲಾಗುವುದು. ರೈಲ್ವೆ ಮಾರ್ಗದ ಮತ್ತೊಂದು ಬದಿಯಲ್ಲಿರುವ ಶಹಪುರ ಮೈಸೂರಿನಲ್ಲೇ ಉಳಿಯುವುದು. ಮೈಸೂರು– ಮಹಾರಾಷ್ಟ್ರ ಗಡಿ ವಿವಾದ ಹಾಗೂ ಚಂಡೀಗಡ ಸಮಸ್ಯೆಯನ್ನು ಇತ್ಯರ್ಥಗೊಳಿಸುವುದಕ್ಕಾಗಿ, ವಿವಾದಕ್ಕೊಳಗಾಗಿರುವ ಪ್ರದೇಶಗಳನ್ನು ಸಮಪಾಲು ಮಾಡಿ ಹಂಚಿ ಕೈತೊಳೆದುಕೊಳ್ಳುವ ಹಾದಿಯಲ್ಲಿ ಕೇಂದ್ರ ಸರ್ಕಾರ ಆಲೋಚಿಸುತ್ತಿರುವುದು ಕಂಡುಬಂದಿದೆ.