<p><strong>ರೈಲುಗಳ ವಿಳಂಬ ಓಡಾಟಕ್ಕೆ ರಾಜ್ಯಸಭೆ ಸದಸ್ಯರ ಕೋಪ</strong></p>.<p><strong>ನವದೆಹಲಿ, ಆ. 3–</strong> ರೈಲುಗಳ ಸಂಚಾರದಲ್ಲಿ ಕಾಲನಿಷ್ಠೆಯಿಲ್ಲದಿರುವ ಬಗ್ಗೆ ಇಂದು ರಾಜ್ಯಸಭೆಯಲ್ಲಿ ಅನೇಕ ಸದಸ್ಯರು ಕೋಪ ವ್ಯಕ್ತಪಡಿಸಿದರು.</p>.<p>ವೇಳೆಗೆ ಸರಿಯಾಗಿ ರೈಲುಗಳ ಸಂಚಾರವಿಲ್ಲದಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ರೈಲ್ವೆ ಸಚಿವ ನಂದಾ ಅವರು ವಿವಿಧ ದಿಸೆಯಲ್ಲಿ ಕೈಗೊಂಡಿರುವ ತೀವ್ರ ಕ್ರಮಗಳ ಫಲವಾಗಿ ರೈಲು ಸಂಚಾರ ಸುಧಾರಿಸಬಹುದೆಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.</p>.<p>ಕೆಲಸಗಾರರಲ್ಲಿ ಶಿಸ್ತಿನ ಕೊರತೆಯಿರುವುದು, ಟೆಲಿಸಂಪರ್ಕ ತಂತಿಗಳು ಮತ್ತು ಸಿಗ್ನಲ್ ಉಪಕರಣಗಳ ಕಳವು ಹಾಗೂ ಸಾರ್ವಜನಿಕ ಚಳವಳಿ ಇವುಗಳು ರೈಲುಗಳು ಕಾಲಕ್ಕೆ ಸರಿಯಾಗಿ ಬಂದು ಹೋಗದಿರುವುದಕ್ಕೆ ಕಾರಣವೆಂದು, ಕೆ.ಕೆ. ಮೆಹ್ತಾ ಅವರ ಪ್ರಶ್ನೆಗೆ ರೈಲ್ವೆ ಉಪಮಂತ್ರಿ ಯೂನಸ್ ಸಲೀಂ ಉತ್ತರ ಕೊಟ್ಟರು.</p>.<p><strong>ಹಂಗಾಮಿ ಕಾರ್ಮಿಕರ ನೇಮಕ ಪದ್ಧತಿ ರದ್ದಿಗೆ ಸರ್ಕಾರದ ನಿರ್ಧಾರ</strong></p>.<p><strong>ನವದೆಹಲಿ, ಆ. 3–</strong> ಹಂಗಾಮಿ ಕಾರ್ಮಿಕರನ್ನು ನೇಮಿಸಿಕೊಳ್ಳುವ ಪದ್ಧತಿಯನ್ನು ರದ್ದುಪಡಿಸಲು ಸರ್ಕಾರ ಉದ್ದೇಶಿಸಿದೆ ಎಂದು ಕೇಂದ್ರದ ಕಾರ್ಮಿಕ ಸಚಿವ ಡಿ.ಸಂಜೀವಯ್ಯ ಅವರು ಇಂದು ಲೋಕಸಭೆಯಲ್ಲಿ ಪ್ರಕಟಿಸಿದರು.</p>.<p>ಈ ವಿಷಯದ ಬಗ್ಗೆ ಕೆಲವು ಸದಸ್ಯರಲ್ಲಿ ತಪ್ಪು ಅಭಿಪ್ರಾಯ ಮೂಡಿರುವುದರಿಂದ, ಸರ್ಕಾರದ ನಿಲುವು ಏನೆಂಬುದನ್ನು ಸ್ಪಷ್ಟಪಡಿಸುವುದು ಅತ್ಯಗತ್ಯ ಎಂದು ತಾವು ಭಾವಿಸಿದುದಾಗಿಯೂ ಅವರು ನುಡಿದರು.</p>.<p>ಇಪ್ಪತ್ತಕ್ಕೂ ಕಡಿಮೆ ಸಂಖ್ಯೆಯ ಕಾರ್ಮಿಕರನ್ನು ನೇಮಿಸಿಕೊಂಡಿರುವ ಸಂಸ್ಥೆಗಳಿಗೆ ಈ ಶಾಸನದ ವಿನಾಯ್ತಿ ದೊರೆಯುವಂತೆ ಸೆಲೆಕ್ಟ್ ಸಮಿತಿ ಶಿಫಾರಸು ಮಾಡಿದೆ. ಹಂಗಾಮಿ ಕಾರ್ಮಿಕರ ರದ್ದು ಮಸೂದೆಯನ್ನು ಈ ಸಮಿತಿಗೆ ಒಪ್ಪಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರೈಲುಗಳ ವಿಳಂಬ ಓಡಾಟಕ್ಕೆ ರಾಜ್ಯಸಭೆ ಸದಸ್ಯರ ಕೋಪ</strong></p>.<p><strong>ನವದೆಹಲಿ, ಆ. 3–</strong> ರೈಲುಗಳ ಸಂಚಾರದಲ್ಲಿ ಕಾಲನಿಷ್ಠೆಯಿಲ್ಲದಿರುವ ಬಗ್ಗೆ ಇಂದು ರಾಜ್ಯಸಭೆಯಲ್ಲಿ ಅನೇಕ ಸದಸ್ಯರು ಕೋಪ ವ್ಯಕ್ತಪಡಿಸಿದರು.</p>.<p>ವೇಳೆಗೆ ಸರಿಯಾಗಿ ರೈಲುಗಳ ಸಂಚಾರವಿಲ್ಲದಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ರೈಲ್ವೆ ಸಚಿವ ನಂದಾ ಅವರು ವಿವಿಧ ದಿಸೆಯಲ್ಲಿ ಕೈಗೊಂಡಿರುವ ತೀವ್ರ ಕ್ರಮಗಳ ಫಲವಾಗಿ ರೈಲು ಸಂಚಾರ ಸುಧಾರಿಸಬಹುದೆಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.</p>.<p>ಕೆಲಸಗಾರರಲ್ಲಿ ಶಿಸ್ತಿನ ಕೊರತೆಯಿರುವುದು, ಟೆಲಿಸಂಪರ್ಕ ತಂತಿಗಳು ಮತ್ತು ಸಿಗ್ನಲ್ ಉಪಕರಣಗಳ ಕಳವು ಹಾಗೂ ಸಾರ್ವಜನಿಕ ಚಳವಳಿ ಇವುಗಳು ರೈಲುಗಳು ಕಾಲಕ್ಕೆ ಸರಿಯಾಗಿ ಬಂದು ಹೋಗದಿರುವುದಕ್ಕೆ ಕಾರಣವೆಂದು, ಕೆ.ಕೆ. ಮೆಹ್ತಾ ಅವರ ಪ್ರಶ್ನೆಗೆ ರೈಲ್ವೆ ಉಪಮಂತ್ರಿ ಯೂನಸ್ ಸಲೀಂ ಉತ್ತರ ಕೊಟ್ಟರು.</p>.<p><strong>ಹಂಗಾಮಿ ಕಾರ್ಮಿಕರ ನೇಮಕ ಪದ್ಧತಿ ರದ್ದಿಗೆ ಸರ್ಕಾರದ ನಿರ್ಧಾರ</strong></p>.<p><strong>ನವದೆಹಲಿ, ಆ. 3–</strong> ಹಂಗಾಮಿ ಕಾರ್ಮಿಕರನ್ನು ನೇಮಿಸಿಕೊಳ್ಳುವ ಪದ್ಧತಿಯನ್ನು ರದ್ದುಪಡಿಸಲು ಸರ್ಕಾರ ಉದ್ದೇಶಿಸಿದೆ ಎಂದು ಕೇಂದ್ರದ ಕಾರ್ಮಿಕ ಸಚಿವ ಡಿ.ಸಂಜೀವಯ್ಯ ಅವರು ಇಂದು ಲೋಕಸಭೆಯಲ್ಲಿ ಪ್ರಕಟಿಸಿದರು.</p>.<p>ಈ ವಿಷಯದ ಬಗ್ಗೆ ಕೆಲವು ಸದಸ್ಯರಲ್ಲಿ ತಪ್ಪು ಅಭಿಪ್ರಾಯ ಮೂಡಿರುವುದರಿಂದ, ಸರ್ಕಾರದ ನಿಲುವು ಏನೆಂಬುದನ್ನು ಸ್ಪಷ್ಟಪಡಿಸುವುದು ಅತ್ಯಗತ್ಯ ಎಂದು ತಾವು ಭಾವಿಸಿದುದಾಗಿಯೂ ಅವರು ನುಡಿದರು.</p>.<p>ಇಪ್ಪತ್ತಕ್ಕೂ ಕಡಿಮೆ ಸಂಖ್ಯೆಯ ಕಾರ್ಮಿಕರನ್ನು ನೇಮಿಸಿಕೊಂಡಿರುವ ಸಂಸ್ಥೆಗಳಿಗೆ ಈ ಶಾಸನದ ವಿನಾಯ್ತಿ ದೊರೆಯುವಂತೆ ಸೆಲೆಕ್ಟ್ ಸಮಿತಿ ಶಿಫಾರಸು ಮಾಡಿದೆ. ಹಂಗಾಮಿ ಕಾರ್ಮಿಕರ ರದ್ದು ಮಸೂದೆಯನ್ನು ಈ ಸಮಿತಿಗೆ ಒಪ್ಪಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>