ತಮ್ಮ ಪ್ರಥಮ ಸಂಯುಕ್ತ ಸಭೆ ಇಲ್ಲಿ ನಡೆದುದು ಶುಭ ಸೂಚನೆಯೆಂದು ದಕ್ಷಿಣ ಪ್ರದೇಶ ಕಾಂಗ್ರೆಸ್ ಸಮಿತಿಗಳ ಮುಕ್ತಾಯ ಅಧಿವೇಶನದಲ್ಲಿ ನುಡಿದ ಅವರು, ‘ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ದೈವಕೃಪೆಯಿಂದ ನಾವು ಆರಿಸಿದ್ದು ಇಲ್ಲಿಯೇ. ಅವರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದರು. ಆದರೆ ದುರದೃಷ್ಟವಶಾತ್ ಶ್ರೀಮತಿ ಇಂದಿರಾ ಗಾಂಧಿ ಅವರನ್ನು ಆಯ್ಕೆ ಮಾಡಿದಾಗ ನಾವು ಇಲ್ಲಿಗೆ ಬರಲಿಲ್ಲ. ಹೊಸಪ್ರಧಾನಿಯೊಬ್ಬರನ್ನು ಆಯ್ಕೆ ಮಾಡಲು ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ
ದೊಡನೆ ನಾವು ಬೇಗನೆ ಹಿಂತಿರುಗಿ ಬರುತ್ತೇವೆ’ ಎಂದರು.