ಈ ಬಗ್ಗೆ ಪ್ರತಿಕ್ರಿಯಿಸಿರುವ ಸರ್ಬಿನಾ, ‘ಜೈಲು ಅಧಿಕಾರಿಗಳಿಂದ ನನಗೆ ಪತ್ರ ಬಂದಿತ್ತು. ಈಗಾಗಲೇ ಮನು ಹದಿನೈದು ವರ್ಷ ಜೈಲಿನಲ್ಲಿ ಕಾಲ ಕಳೆದಿದ್ದಾನೆ. ಈಗ ಆತನನ್ನು ಕೋರ್ಟ್ ಬಿಡುಗಡೆಗೊಳಿಸಿದರೆ ನನ್ನ ಅಭ್ಯಂತರವಿಲ್ಲ. ನಾನು ಆ ಘಟನೆಯಿಂದ ಹೊರಬಂದಿದ್ದೇನೆ. ಜೈಲಿನಲ್ಲಿದ್ದ ಅವಧಿ ಯಲ್ಲಿ ಮನು ಶರ್ಮಾ ಒಳ್ಳೆಯ ಕೆಲಸ ಮಾಡಿದ್ದಾನೆ. ಇತರ ಕೈದಿಗಳಿಗೂ ಸಹಾಯ ಮಾಡಿದ್ದಾನೆ. ಇದು ಸುಧಾ ರಣೆಯ ಪ್ರತಿಫಲನ’ ಎಂದು ತಿಳಿಸಿದ್ದಾರೆ.