<p>ದೆಹಲಿ ಗದ್ದುಗೆ ಗೆದ್ದ ‘ಪೊರಕೆ ಸ್ಟಾರ್’ ಕೇಜ್ರಿವಾಲರನ್ನು ಕರ್ನಾಟಕದ ‘ತೆನೆ ಸ್ಟಾರ್’ ಕುಮಾರಣ್ಣ ಅಭಿನಂದಿಸಿದರು. ‘ಕಂಗ್ರ್ಯಾಜುಲೇಶನ್ಸ್ ಬ್ರದರ್, ಏನ್ ಮ್ಯಾಜಿಕ್ ಮಾಡಿಬಿಟ್ರಿ ನೀವು? ಕೈ-ಕಮಲ ಎರಡನ್ನೂ ಗುಡಿಸಿ ಹಾಕಿಬಿಟ್ರಲ್ಲ ಹೆಂಗೆ? ನಾವೂ ನಿಮ್ ತರ ಗೆಲ್ಲೋಕೆ ಏನ್ ಮಾಡಬೇಕು?’</p>.<p>‘ಕಡಿಮೆ ಮಾತಾಡಬೇಕು, ಜಾಸ್ತಿ ಬೈಸ್ಕೋಬೇಕು...’ ಕೇಜ್ರಿವಾಲ್ ನಕ್ಕರು.</p>.<p>‘ಬೈಸ್ಕೋಬೇಕಾ? ಯಾರಿಂದ?</p>.<p>‘ಬಿಜೆಪಿ... ಐ ಮೀನ್ ವಿರೋಧ ಪಕ್ಷದೋರಿಂದ. ಅವರು ಬೈದಷ್ಟೂ ನಮಗೆ ಜಾಸ್ತಿ ವೋಟು ಬರುತ್ತೆ... ಅವರು ಎಷ್ಟೇ ಬೈದ್ರೂ ನಾವು ಕೇಳಿಸ್ಕೋಬಾರ್ದು’.</p>.<p>‘ಹೌದಾ? ನೀವು ಕಿವಿಗೆ ಮಫ್ಲರ್ ಕಟ್ಕೊಳ್ಕೋದು ಅದಕ್ಕೇನಾ?’</p>.<p>‘ಹೌದು... ಎಷ್ಟೋ ಸಲ ಕೆಲವರು ನನಗೆ ಪಬ್ಲಿಕ್ಕಲ್ಲಿ ಕಪಾಳಮೋಕ್ಷ ಮಾಡಿದಾರೆ. ನಾನು ಬೇಜಾರ್ ಮಾಡ್ಕಂಡಿಲ್ಲ, ನಿಮ್ಮ ಹಾಗೆ ಅಳಲೂ ಇಲ್ಲ...’</p>.<p>‘ನನಗೆ ಅದು ಕಷ್ಟ ಬ್ರದರ್, ಬೇರೆ ಏನ್ ಮಾಡಬೇಕು ಹೇಳಿ. ಅಥ್ವ ನೀವು ಏನೇನ್ ಮಾಡಿದ್ರಿ ಅದನ್ನಾದ್ರೂ ಹೇಳಿ ಪ್ಲೀಸ್...’</p>.<p>‘ನಾನು ಏನೇನ್ ಮಾಡಿದೆ ಅಲ್ಲ, ಏನೇನ್ ಮಾಡಲಿಲ್ಲ ಅದನ್ನ ಕೇಳಿ. ನಾನು ಗುಡಿ ಗುಂಡಾರ ಸುತ್ತಲಿಲ್ಲ. ಹೋಮ-ಹವನ ಮಾಡಿಸ್ಲಿಲ್ಲ. ನಿಂಬೆಹಣ್ಣು ಹಂಚಲಿಲ್ಲ. ಹಳ್ಳಿಗಳಿಗೆ ಹೋಗಿ ಮಲಗಲಿಲ್ಲ. ಮಾಡಿದ್ದು ಒಂದೇ... ಅಭಿವೃದ್ಧಿ, ಅಭಿವೃದ್ಧಿ’.</p>.<p>‘ಅಭಿವೃದ್ಧಿ... ನಾನೂ ಮಾಡಿದ್ನಲ್ಲ?’</p>.<p>‘ನಾನು ಹೇಳಿದ್ದು ಜನರ ಅಭಿವೃದ್ಧಿ. ಅವರಿಗೆ ಬೇಕಾದ್ದು ಕೊಟ್ಟೆ, ಗೆದ್ದೆ...’</p>.<p>‘ನಾನೂ ಸಾಕಷ್ಟು ಕೊಟ್ಟೆ ಬ್ರದರ್... ಹೋಗ್ಲಿ ಈಗ ನಮ್ಮ ಸಿಂಬಲ್ ಚೇಂಜ್ ಮಾಡ್ಕಂಡ್ರೆ ನಾವು ಗೆಲ್ಲಬಹುದಾ? ತಲೆ ಮೇಲೆ ತೆನೆ ಬದಲು ಪೊರಕೆ ಇಟ್ಕಂಡ್ರೆ ಹೆಂಗೆ?’</p>.<p>‘ನೀವೊಳ್ಳೆ, ಸಿಂಬಲ್ ಯಾವುದಾದ್ರೇನು, ಜನರ ಪ್ರೀತಿ ಇದ್ರೆ ಚಂಬಲ್ ಕಣಿವೇಲಿ ಬೇಕಾದ್ರೂ ನಿಂತು ಗೆಲ್ಲಬಹುದು...’</p>.<p>‘ಕರೆಕ್ಟ್, ಜನರ ಪ್ರೀತಿ ಗೆಲ್ಲೋಕೆ ಊರೂರಲ್ಲೂ ‘ಜನಪ್ರೀತಿ ಯಾಗ’ ಮಾಡಿದ್ರೆ ಹೆಂಗೆ?’ ಕುಮಾರಣ್ಣನ ಪ್ರಶ್ನೆಗೆ ಕೇಜ್ರಿ ಪಿಟಿಕ್ಕೆನ್ನಲಿಲ್ಲ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ದೆಹಲಿ ಗದ್ದುಗೆ ಗೆದ್ದ ‘ಪೊರಕೆ ಸ್ಟಾರ್’ ಕೇಜ್ರಿವಾಲರನ್ನು ಕರ್ನಾಟಕದ ‘ತೆನೆ ಸ್ಟಾರ್’ ಕುಮಾರಣ್ಣ ಅಭಿನಂದಿಸಿದರು. ‘ಕಂಗ್ರ್ಯಾಜುಲೇಶನ್ಸ್ ಬ್ರದರ್, ಏನ್ ಮ್ಯಾಜಿಕ್ ಮಾಡಿಬಿಟ್ರಿ ನೀವು? ಕೈ-ಕಮಲ ಎರಡನ್ನೂ ಗುಡಿಸಿ ಹಾಕಿಬಿಟ್ರಲ್ಲ ಹೆಂಗೆ? ನಾವೂ ನಿಮ್ ತರ ಗೆಲ್ಲೋಕೆ ಏನ್ ಮಾಡಬೇಕು?’</p>.<p>‘ಕಡಿಮೆ ಮಾತಾಡಬೇಕು, ಜಾಸ್ತಿ ಬೈಸ್ಕೋಬೇಕು...’ ಕೇಜ್ರಿವಾಲ್ ನಕ್ಕರು.</p>.<p>‘ಬೈಸ್ಕೋಬೇಕಾ? ಯಾರಿಂದ?</p>.<p>‘ಬಿಜೆಪಿ... ಐ ಮೀನ್ ವಿರೋಧ ಪಕ್ಷದೋರಿಂದ. ಅವರು ಬೈದಷ್ಟೂ ನಮಗೆ ಜಾಸ್ತಿ ವೋಟು ಬರುತ್ತೆ... ಅವರು ಎಷ್ಟೇ ಬೈದ್ರೂ ನಾವು ಕೇಳಿಸ್ಕೋಬಾರ್ದು’.</p>.<p>‘ಹೌದಾ? ನೀವು ಕಿವಿಗೆ ಮಫ್ಲರ್ ಕಟ್ಕೊಳ್ಕೋದು ಅದಕ್ಕೇನಾ?’</p>.<p>‘ಹೌದು... ಎಷ್ಟೋ ಸಲ ಕೆಲವರು ನನಗೆ ಪಬ್ಲಿಕ್ಕಲ್ಲಿ ಕಪಾಳಮೋಕ್ಷ ಮಾಡಿದಾರೆ. ನಾನು ಬೇಜಾರ್ ಮಾಡ್ಕಂಡಿಲ್ಲ, ನಿಮ್ಮ ಹಾಗೆ ಅಳಲೂ ಇಲ್ಲ...’</p>.<p>‘ನನಗೆ ಅದು ಕಷ್ಟ ಬ್ರದರ್, ಬೇರೆ ಏನ್ ಮಾಡಬೇಕು ಹೇಳಿ. ಅಥ್ವ ನೀವು ಏನೇನ್ ಮಾಡಿದ್ರಿ ಅದನ್ನಾದ್ರೂ ಹೇಳಿ ಪ್ಲೀಸ್...’</p>.<p>‘ನಾನು ಏನೇನ್ ಮಾಡಿದೆ ಅಲ್ಲ, ಏನೇನ್ ಮಾಡಲಿಲ್ಲ ಅದನ್ನ ಕೇಳಿ. ನಾನು ಗುಡಿ ಗುಂಡಾರ ಸುತ್ತಲಿಲ್ಲ. ಹೋಮ-ಹವನ ಮಾಡಿಸ್ಲಿಲ್ಲ. ನಿಂಬೆಹಣ್ಣು ಹಂಚಲಿಲ್ಲ. ಹಳ್ಳಿಗಳಿಗೆ ಹೋಗಿ ಮಲಗಲಿಲ್ಲ. ಮಾಡಿದ್ದು ಒಂದೇ... ಅಭಿವೃದ್ಧಿ, ಅಭಿವೃದ್ಧಿ’.</p>.<p>‘ಅಭಿವೃದ್ಧಿ... ನಾನೂ ಮಾಡಿದ್ನಲ್ಲ?’</p>.<p>‘ನಾನು ಹೇಳಿದ್ದು ಜನರ ಅಭಿವೃದ್ಧಿ. ಅವರಿಗೆ ಬೇಕಾದ್ದು ಕೊಟ್ಟೆ, ಗೆದ್ದೆ...’</p>.<p>‘ನಾನೂ ಸಾಕಷ್ಟು ಕೊಟ್ಟೆ ಬ್ರದರ್... ಹೋಗ್ಲಿ ಈಗ ನಮ್ಮ ಸಿಂಬಲ್ ಚೇಂಜ್ ಮಾಡ್ಕಂಡ್ರೆ ನಾವು ಗೆಲ್ಲಬಹುದಾ? ತಲೆ ಮೇಲೆ ತೆನೆ ಬದಲು ಪೊರಕೆ ಇಟ್ಕಂಡ್ರೆ ಹೆಂಗೆ?’</p>.<p>‘ನೀವೊಳ್ಳೆ, ಸಿಂಬಲ್ ಯಾವುದಾದ್ರೇನು, ಜನರ ಪ್ರೀತಿ ಇದ್ರೆ ಚಂಬಲ್ ಕಣಿವೇಲಿ ಬೇಕಾದ್ರೂ ನಿಂತು ಗೆಲ್ಲಬಹುದು...’</p>.<p>‘ಕರೆಕ್ಟ್, ಜನರ ಪ್ರೀತಿ ಗೆಲ್ಲೋಕೆ ಊರೂರಲ್ಲೂ ‘ಜನಪ್ರೀತಿ ಯಾಗ’ ಮಾಡಿದ್ರೆ ಹೆಂಗೆ?’ ಕುಮಾರಣ್ಣನ ಪ್ರಶ್ನೆಗೆ ಕೇಜ್ರಿ ಪಿಟಿಕ್ಕೆನ್ನಲಿಲ್ಲ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>