* ‘ನೀಟ್’ನಲ್ಲಿ ನೀವು ರಾಜ್ಯಕ್ಕೆ ಟಾಪರ್ ಅಂತ ಗೊತ್ತಾದಾಗ ನಿಮ್ಮೂರು, ಹಾಸನ ಜಿಲ್ಲೆಯ ರಾಮನಾಥಪುರದಲ್ಲಿ ಎಂತಹ ಸಂಭ್ರಮ ಇತ್ತು ಹೇಳಿ?
ನಿಜಕ್ಕೂ ಊರಿಗೆ ಊರೇ ಸಂಭ್ರಮಪಟ್ಟಿದೆ. ಅದುವರೆಗೆ ಟಿ.ವಿಯಲ್ಲಿ ಮಾತ್ರ ನಮ್ಮೂರ ಜನರ್ಯಾಂಕ್ ಸಂಭ್ರಮ ನೋಡಿದ್ದಿರಬೇಕು.
* ನಿಮ್ಮ ಕಲಿಕೆಗೆ ದಕ್ಷಿಣಾ ಫೌಂಡೇಶನ್ ನೆರವಾಗಿದೆ. ನೀವು ಸಮಾಜಕ್ಕೆ ಹೇಗೆ ನೆರವಾಗಬೇಕು ಎಂದುಕೊಂಡಿರುವಿರಿ?
ನಾನೂ ಕೈಲಾದ ನೆರವು ನೀಡಲು ಈಗಲೇ ಸಂಕಲ್ಪ ಮಾಡಿದ್ದೇನೆ. ಏನಿಲ್ಲವೆಂದರೂ ನೀಟ್ನಂತಹ ಪರೀಕ್ಷೆಗೆ ತಯಾರಿ ನಡೆಸುವ ನಮ್ಮೂರ, ನಮ್ಮ ಸುತ್ತಮುತ್ತಲಿನ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತೇನೆ.
* ನಿಮ್ಮ ಬಳಿ ಮೊಬೈಲ್ ಇರಲಿಲ್ಲ ಎಂದು ತಿಳಿಯಿತು. ಲ್ಯಾಪ್ಟಾಪ್ ಸಹ ಇರಲಿಲ್ಲವೇ?
ಇಲ್ಲ, ನನಗೆ ಅದರ ಅಗತ್ಯವೇ ಬೀಳಲಿಲ್ಲ. ಓದಲು ಬೇಕಾದ ಎಲ್ಲ ಅಗತ್ಯಗಳನ್ನೂ ದಕ್ಷಿಣಾ ಫೌಂಡೇಶನ್ನವರು ಕೊಟ್ಟಿದ್ದರು. ಮತ್ತೆ ಲ್ಯಾಪ್ಟಾಪ್ನ ಅಗತ್ಯವೇನಿದೆ?
* ಈಗ ಟಾಪರ್ ಆಗಿದ್ದೀರಿ, ಇನ್ನಾದರೂ ಮೊಬೈಲ್ ಬೇಡವೇ?
ಈಗಲೂ ನನಗೆ ಅದು ಅತ್ಯಗತ್ಯ ಎನಿಸುತ್ತಿಲ್ಲ. ಆದರೆ ಮುಂದೆ ಕೆಲವೊಂದು ಮಾಹಿತಿಗಳನ್ನು ಬೇಗ ಪಡೆಯುವ ಅಗತ್ಯ ಇರುವುದರಿಂದ, ಮೊಬೈಲ್ ಕೊಡಿಸುವುದಾಗಿ ಅಪ್ಪ ಹೇಳುತ್ತಿದ್ದಾರೆ.
* ನಿಮ್ಮ ಪ್ರಕಾರ ‘ನೀಟ್’ ಯಾಕೆ ಕಷ್ಟ ಅಲ್ಲ?
ಸಿದ್ಧತೆಯೇ ಇದಕ್ಕೆಲ್ಲ ಕಾರಣ. ಎನ್ಸಿಇಆರ್ಟಿ ಮೇಲೆಯೇ ಗಮನಹರಿಸಬೇಕು. ಈ ಬಾರಿ ಅಲ್ಲಿನ ಪ್ರತಿ ಸಾಲು ಸಹ ಪರೀಕ್ಷೆಗೆ ಬಂದಿತ್ತು. ಜತೆಗೆ ಭೌತವಿಜ್ಞಾನ, ರಸಾಯನ ವಿಜ್ಞಾನದಲ್ಲಿ ಸ್ವಂತ ಪ್ರಯೋಗ ಮಾಡಲೇಬೇಕು. ಹಾಗೆ ಮಾಡಿದರೆ ಮಾತ್ರ ಪರೀಕ್ಷೆಯಲ್ಲಿ ಕೈಯ ವೇಗ ಹೆಚ್ಚುತ್ತದೆ.
* ಗ್ರಾಮೀಣ ಪ್ರದೇಶದ ಹುಡುಗ ಪೇಟೆ ಮಕ್ಕಳನ್ನೂ ಹಿಂದಿಕ್ಕಿ ಹೋದನಲ್ಲ. ಇದು ಹೇಗೆ ಸಾಧ್ಯವಾಯಿತು?
ಗಮನ ಕೊಟ್ಟು ಓದಿದರೆ ಮತ್ತು ಓದುವ ಹಂತದಲ್ಲಿ ಎದುರಾಗುವ ಸಂಶಯಗಳನ್ನು ಉಪನ್ಯಾಸಕರ ನೆರವಿನಿಂದ ಬಗೆಹರಿಸಿಕೊಂಡರೆ ಮುಂದೆ ಪರೀಕ್ಷೆಯಲ್ಲಿ ತೊಡಕಾಗದು. ಸಾಧನೆಗೆ ಹಳ್ಳಿ- ಪೇಟೆ ಎಂಬುದಿಲ್ಲ.