‘ಮೊದ್ಲು ಕಮಲಕ್ಕಂಗೆ ಬೈತಿದ್ದ, ಈಗ ನಮ್ಮ ದೇಶ ಅವರ ಕೈಯಾಗೆ ಸುರಕ್ಷಿತ ಐತಿ ಅಂತ ಕೊಂಡಾಡಕ್ಕೆ ಹತ್ಯಾನ. ಕೊರೊನಾಕ್ಕಿಂತ ಮೊದ್ಲು ಈ ಪಕ್ಷಾಂತರ ವೈರಸ್ಸಿಗಿ ಲಸಿಕೆ ಹಾಕಬೇಕು’ ಎಂದೆ. ನನ್ನ ಮಾತು ಕಿವಿಗೆ ಹಾಕಿಕೊಳ್ಳದೇ, ‘ಪಾಪ ನಮ್ಮ ಮುಕೇಶಣ್ಣ ರಗಡ್ ಕಷ್ಟಪಟ್ಟು ದುಡಿದು, ರೊಕ್ಕ ಮಾಡಿದ್ದ. ಷೇರು–ಕರಡಿ ಅವನ್ನೂ ಹಿಂಡಿ ಹಿಪ್ಪೆ ಮಾಡೈತಂತ...’ ಎಂದು ಲೊಚಗುಟ್ಟಿದ ಬೆಕ್ಕಣ್ಣ ಮೂತಿಗೊಂದು ಮಾಸ್ಕ್ ಸಿಕ್ಕಿಸಿಕೊಂಡು ಹೊರಟಿತು. ‘ಇಲ್ಲೂ ಗೋಮೂತ್ರ ಪಾರ್ಟಿ ಮಾಡ್ತಾರಂತ, ನಾನೂ ಒಂದು ಗ್ಲಾಸ್ ಏರಿಸಿ ಬರ್ತೀನಿ’.