<p><strong>ಬೆಳಗಾವಿ, ನಲಗೊಂಡ ಕ್ಷೇತ್ರ ಮೇ 27ರಂದು ಚುನಾವಣೆ</strong></p>.<p><strong>ನವದೆಹಲಿ, ಏ. 12– </strong>ಅತ್ಯಧಿಕ ಅಭ್ಯರ್ಥಿಗಳು ಕಣಕ್ಕಿಳಿದಿದ್ದುದರಿಂದ ಮುಂದೂಡಲಾಗಿದ್ದ ಕರ್ನಾಟಕದ ಬೆಳಗಾವಿ, ಆಂಧ್ರ ಪ್ರದೇಶದ ನಲಗೊಂಡ ಲೋಕಸಭಾ ಕ್ಷೇತ್ರಗಳ ಚುನಾವಣೆ ಮೇ 27ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ಪ್ರಕಟಿಸಿದೆ.</p>.<p>ಭಾರಿ ಪ್ರಮಾಣದಲ್ಲಿ ಸ್ಪರ್ಧಿಗಳು ಕಣದಲ್ಲಿರುವುದರಿಂದ, ಆಡಳಿತದ ದೃಷ್ಟಿಯಿಂದ ಕೆಲವು ತೊಂದರೆಗಳಿರುವು ದಾಗಿ ರಾಜ್ಯ ಸರ್ಕಾರಗಳು ಮಾಡಿದ್ದ ಮನವಿಯನ್ನು ಗಮನಿಸಿ ಈ ಕ್ಷೇತ್ರಗಳ ಚುನಾವಣೆ ದಿನಗಳನ್ನು ಈಗ ಬದಲಿಸ ಬೇಕಾಯಿತು ಎಂದು ಆಯೋಗದ ವಕ್ತಾರ ಸುಭಾಷ್ ಪಾಣಿ ತಿಳಿಸಿದರು.</p>.<p><strong>ಪ್ರಧಾನಿಗೆ ಏಕೆ ವಿಮಾನ– ಅಡ್ವಾಣಿ</strong></p>.<p><strong>ಬೆಂಗಳೂರು, ಏ. 12– </strong>ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಸರ್ಕಾರಿ ಹೆಲಿಕಾಪ್ಟರ್ ಅಥವಾ ವಿಮಾನವನ್ನುಬಳಸಬಾರದೆಂಬ ಚುನಾವಣಾ ಆಯೋಗದ ನಿಬಂಧನೆಯನ್ನು ಪ್ರಧಾನ ಮಂತ್ರಿಗಳಿಗೂ ಅನ್ವಯಿಸಬೇಕು ಎಂದು ಬಿಜೆಪಿಯ ಅಧ್ಯಕ್ಷ ಎಲ್.ಕೆ.ಅಡ್ವಾಣಿಅಭಿಪ್ರಾಯಪಟ್ಟರು.</p>.<p>ಪ್ರಧಾನ ಮಂತ್ರಿಗಳ ಹೆಲಿಕಾಪ್ಟರ್ ಅಥವಾ ವಿಮಾನ ಬಳಕೆಯ ವೆಚ್ಚವನ್ನು ಅವರ ಪಕ್ಷವು ತುಂಬುವುದಾದಲ್ಲಿ, ವೆಚ್ಚ ತುಂಬುವ ಸಾಮರ್ಥ್ಯವಿರುವ ಇತರ ಪಕ್ಷಗಳಿಗೂ ಅವುಗಳ ಬಳಕೆಗೆ ಅನುವು ಮಾಡಿಕೊಡಬೇಕೆಂದು ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ, ನಲಗೊಂಡ ಕ್ಷೇತ್ರ ಮೇ 27ರಂದು ಚುನಾವಣೆ</strong></p>.<p><strong>ನವದೆಹಲಿ, ಏ. 12– </strong>ಅತ್ಯಧಿಕ ಅಭ್ಯರ್ಥಿಗಳು ಕಣಕ್ಕಿಳಿದಿದ್ದುದರಿಂದ ಮುಂದೂಡಲಾಗಿದ್ದ ಕರ್ನಾಟಕದ ಬೆಳಗಾವಿ, ಆಂಧ್ರ ಪ್ರದೇಶದ ನಲಗೊಂಡ ಲೋಕಸಭಾ ಕ್ಷೇತ್ರಗಳ ಚುನಾವಣೆ ಮೇ 27ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ಪ್ರಕಟಿಸಿದೆ.</p>.<p>ಭಾರಿ ಪ್ರಮಾಣದಲ್ಲಿ ಸ್ಪರ್ಧಿಗಳು ಕಣದಲ್ಲಿರುವುದರಿಂದ, ಆಡಳಿತದ ದೃಷ್ಟಿಯಿಂದ ಕೆಲವು ತೊಂದರೆಗಳಿರುವು ದಾಗಿ ರಾಜ್ಯ ಸರ್ಕಾರಗಳು ಮಾಡಿದ್ದ ಮನವಿಯನ್ನು ಗಮನಿಸಿ ಈ ಕ್ಷೇತ್ರಗಳ ಚುನಾವಣೆ ದಿನಗಳನ್ನು ಈಗ ಬದಲಿಸ ಬೇಕಾಯಿತು ಎಂದು ಆಯೋಗದ ವಕ್ತಾರ ಸುಭಾಷ್ ಪಾಣಿ ತಿಳಿಸಿದರು.</p>.<p><strong>ಪ್ರಧಾನಿಗೆ ಏಕೆ ವಿಮಾನ– ಅಡ್ವಾಣಿ</strong></p>.<p><strong>ಬೆಂಗಳೂರು, ಏ. 12– </strong>ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಸರ್ಕಾರಿ ಹೆಲಿಕಾಪ್ಟರ್ ಅಥವಾ ವಿಮಾನವನ್ನುಬಳಸಬಾರದೆಂಬ ಚುನಾವಣಾ ಆಯೋಗದ ನಿಬಂಧನೆಯನ್ನು ಪ್ರಧಾನ ಮಂತ್ರಿಗಳಿಗೂ ಅನ್ವಯಿಸಬೇಕು ಎಂದು ಬಿಜೆಪಿಯ ಅಧ್ಯಕ್ಷ ಎಲ್.ಕೆ.ಅಡ್ವಾಣಿಅಭಿಪ್ರಾಯಪಟ್ಟರು.</p>.<p>ಪ್ರಧಾನ ಮಂತ್ರಿಗಳ ಹೆಲಿಕಾಪ್ಟರ್ ಅಥವಾ ವಿಮಾನ ಬಳಕೆಯ ವೆಚ್ಚವನ್ನು ಅವರ ಪಕ್ಷವು ತುಂಬುವುದಾದಲ್ಲಿ, ವೆಚ್ಚ ತುಂಬುವ ಸಾಮರ್ಥ್ಯವಿರುವ ಇತರ ಪಕ್ಷಗಳಿಗೂ ಅವುಗಳ ಬಳಕೆಗೆ ಅನುವು ಮಾಡಿಕೊಡಬೇಕೆಂದು ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>