ನವದೆಹಲಿ, ಜ. 28– ಕಾವೇರಿ ನದಿ ಪಾತ್ರದ ಮಳೆ ಪ್ರಮಾಣ ಹಾಗೂ ಜಲಾಶಯಗಳ ನೀರಿನ ಹರಿವಿಗೆ ಸಂಬಂಧಿಸಿದಂತೆ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುವ ಒಪ್ಪಂದಕ್ಕೆ ಕರ್ನಾಟಕವೂ ಸೇರಿ ನಾಲ್ಕು ರಾಜ್ಯಗಳು ಇಂದು ಸಹಿ ಹಾಕಿದವು.
ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಯ ವಕೀಲರು,ಇಂದು ಈ ಒಪ್ಪಂದಕ್ಕೆ ಸಹಿ ಹಾಕಿದಮನವಿ ಪತ್ರವನ್ನು ಕಾವೇರಿ ಜಲವಿವಾದಗಳ ನ್ಯಾಯಮಂಡಳಿಯ ಅಧ್ಯಕ್ಷ, ನ್ಯಾಯಮೂರ್ತಿ ಎನ್.ಪಿ.ಸಿಂಗ್ ಅವರಿಗೆ ನೀಡಿದರು.