<h3>ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಭೂಕಂಪನ</h3>.<p>ಬೆಂಗಳೂರು, ಜ. 29– ಗುಜರಾತ್ ಭೂಕಂಪ ಜನರ ಮನದಲ್ಲಿ ಇನ್ನೂ ಭಯವನ್ನು ಉಳಿಸಿರುವಂತೆಯೇ ಇಂದು ಬೆಳಗ್ಗೆ 8.08 ಗಂಟೆಗೆ ಬೆಂಗಳೂರು, ಕನಕಪುರ, ಮೈಸೂರು, ತುಮಕೂರು ಜಿಲ್ಲೆ ಮತ್ತು ರಾಜ್ಯದ ಇತರ ಕೆಲವು ದಕ್ಷಿಣ ಭಾಗಗಳಲ್ಲಿ ಲಘು ಭೂಕಂಪನ ಸಂಭವಿಸಿ ಜನರು ಭಯಭೀತರಾಗುವಂತೆ ಮಾಡಿತು. </p>.<p>ಈ ಭೂಕಂಪನದಿಂದ ಪ್ರಾಣ ಅಥವಾ ಹೆಚ್ಚಿನ ಪ್ರಮಾಣದ ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲ. ರಿಕ್ಟರ್ ಮಾಪಕದಲ್ಲಿ ಈ ಕಂಪನ 4.3ರಷ್ಟು ದಾಖಲಾಗಿದ್ದು, ಸುಮಾರು ಎರಡರಿಂದ ಮೂರು ಸೆಕೆಂಡುಗಳವರೆಗೆ ಭೂಮಿ ಕಂಪಿಸಿತು ಎಂದು ಹವಾಮಾನ ಇಲಾಖೆಯ ನಿರ್ದೇಶಕ ಡಾ. ಎ.ಎಲ್. ಕೊಪ್ಪರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>
<h3>ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಭೂಕಂಪನ</h3>.<p>ಬೆಂಗಳೂರು, ಜ. 29– ಗುಜರಾತ್ ಭೂಕಂಪ ಜನರ ಮನದಲ್ಲಿ ಇನ್ನೂ ಭಯವನ್ನು ಉಳಿಸಿರುವಂತೆಯೇ ಇಂದು ಬೆಳಗ್ಗೆ 8.08 ಗಂಟೆಗೆ ಬೆಂಗಳೂರು, ಕನಕಪುರ, ಮೈಸೂರು, ತುಮಕೂರು ಜಿಲ್ಲೆ ಮತ್ತು ರಾಜ್ಯದ ಇತರ ಕೆಲವು ದಕ್ಷಿಣ ಭಾಗಗಳಲ್ಲಿ ಲಘು ಭೂಕಂಪನ ಸಂಭವಿಸಿ ಜನರು ಭಯಭೀತರಾಗುವಂತೆ ಮಾಡಿತು. </p>.<p>ಈ ಭೂಕಂಪನದಿಂದ ಪ್ರಾಣ ಅಥವಾ ಹೆಚ್ಚಿನ ಪ್ರಮಾಣದ ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲ. ರಿಕ್ಟರ್ ಮಾಪಕದಲ್ಲಿ ಈ ಕಂಪನ 4.3ರಷ್ಟು ದಾಖಲಾಗಿದ್ದು, ಸುಮಾರು ಎರಡರಿಂದ ಮೂರು ಸೆಕೆಂಡುಗಳವರೆಗೆ ಭೂಮಿ ಕಂಪಿಸಿತು ಎಂದು ಹವಾಮಾನ ಇಲಾಖೆಯ ನಿರ್ದೇಶಕ ಡಾ. ಎ.ಎಲ್. ಕೊಪ್ಪರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>