ನವದೆಹಲಿ, ಡಿ.30- ಭಾರತೀಯ ರಕ್ಷಣಾ ಸೇವೆಯ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಜನರಲ್ ವಿಷ್ಣು ಭಾಗವತ್ ಅವರನ್ನು ಸರ್ಕಾರ ಸೇವೆಯಿಂದ ವಜಾ ಮಾಡಿತು.
ನೌಕಾ ಪಡೆಯ ಉಪಮುಖ್ಯಸ್ಥರ ನೇಮಕ ವಿಚಾರದಲ್ಲಿ ಸರ್ಕಾರದೊಂದಿಗೆ ಬಹಿರಂಗ ಸಂಘರ್ಷಕ್ಕೆ ಇಳಿದಿದ್ದ ಭಾಗವತ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.