<p><strong>ರಂಗಕ್ಕೆ ಬೆಂಬಲ: ಶರ್ಮಾಗೆಕಾಂಗ್ರೆಸ್ ಪತ್ರ</strong></p>.<p>ನವದೆಹಲಿ, ಏ. 18 (ಪಿಟಿಐ, ಯುಎನ್ಐ)– ಹೊಸ ನಾಯಕನ ನೇತೃತ್ವದಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸಲು ಸಂಯುಕ್ತ ರಂಗಕ್ಕೆ ಬೆಂಬಲ ನೀಡುವುದಾಗಿ ಕಾಂಗ್ರೆಸ್(ಐ) ಪಕ್ಷ ಇಂದು ರಾಷ್ಟ್ರಪತಿ ಡಾ. ಶಂಕರದಯಾಳ್ ಶರ್ಮಾ ಅವರಿಗೆ ಪತ್ರ ಬರೆದಿರುವುದರಿಂದ ಸಂಯುಕ್ತ ರಂಗಕ್ಕೆ ಹೊಸ ನಾಯಕನನ್ನು ಆರಿಸಲು ಇದ್ದ ಅಡ್ಡಿ ನಿವಾರಣೆಯಾದಂತಾಗಿದೆ.</p>.<p>ಹೊಸ ನಾಯಕನ ಆಯ್ಕೆ ಕುರಿತಂತೆ ಆಂಧ್ರ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಇಂದು ಮಧ್ಯರಾತ್ರಿ ಪ್ರಧಾನಿ ಸೇರಿದಂತೆ ರಂಗದ ಘಟಕ ಪಕ್ಷಗಳ ನಾಯಕರ ಜತೆ ಮೊದಲ ಸುತ್ತಿನ ಮಾತುಕತೆ ನಡೆಸಿದರು. ನಾಳೆ ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ.</p>.<p>ಸಂಯುಕ್ತ ರಂಗವು ದೇವೇಗೌಡ ಅವರ ಉತ್ತರಾಧಿಕಾರಿಯನ್ನು ನಾಳೆ ಆರಿಸುವ ಸಂಭವವಿದೆ.</p>.<p><strong>ನಕಲಿ ವೈದ್ಯಕೀಯ ಕಾಲೇಜು–ಗಣ್ಯರ ಬಂಧನ</strong></p>.<p>ರಾಯಚೂರು, ಏ. 18– ಸಿಂಧನೂರಿನಲ್ಲಿ ನಕಲಿ ವೈದ್ಯಕೀಯ ಕಾಲೇಜೊಂದನ್ನು ಸ್ಥಾಪಿಸಿ ಅನೇಕ ಮುಗ್ಧ ವಿದ್ಯಾರ್ಥಿಗಳನ್ನು ವಂಚಿಸಿದ ಆರೋಪದ ಮೇಲೆ ಅಲ್ಲಿನ ಪೊಲೀಸರು ಇಬ್ಬರು ವೈದ್ಯರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಸಿಂಧನೂರಿನ ಇತರ ಕೆಲ ಪ್ರತಿಷ್ಠಿತರು ಬಂಧನದ ಬೆದರಿಕೆಯಿಂದ ಭೂಗತರಾಗಿದ್ದು ಅವರಿಗಾಗಿ ಶೋಧ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಂಗಕ್ಕೆ ಬೆಂಬಲ: ಶರ್ಮಾಗೆಕಾಂಗ್ರೆಸ್ ಪತ್ರ</strong></p>.<p>ನವದೆಹಲಿ, ಏ. 18 (ಪಿಟಿಐ, ಯುಎನ್ಐ)– ಹೊಸ ನಾಯಕನ ನೇತೃತ್ವದಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸಲು ಸಂಯುಕ್ತ ರಂಗಕ್ಕೆ ಬೆಂಬಲ ನೀಡುವುದಾಗಿ ಕಾಂಗ್ರೆಸ್(ಐ) ಪಕ್ಷ ಇಂದು ರಾಷ್ಟ್ರಪತಿ ಡಾ. ಶಂಕರದಯಾಳ್ ಶರ್ಮಾ ಅವರಿಗೆ ಪತ್ರ ಬರೆದಿರುವುದರಿಂದ ಸಂಯುಕ್ತ ರಂಗಕ್ಕೆ ಹೊಸ ನಾಯಕನನ್ನು ಆರಿಸಲು ಇದ್ದ ಅಡ್ಡಿ ನಿವಾರಣೆಯಾದಂತಾಗಿದೆ.</p>.<p>ಹೊಸ ನಾಯಕನ ಆಯ್ಕೆ ಕುರಿತಂತೆ ಆಂಧ್ರ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಇಂದು ಮಧ್ಯರಾತ್ರಿ ಪ್ರಧಾನಿ ಸೇರಿದಂತೆ ರಂಗದ ಘಟಕ ಪಕ್ಷಗಳ ನಾಯಕರ ಜತೆ ಮೊದಲ ಸುತ್ತಿನ ಮಾತುಕತೆ ನಡೆಸಿದರು. ನಾಳೆ ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ.</p>.<p>ಸಂಯುಕ್ತ ರಂಗವು ದೇವೇಗೌಡ ಅವರ ಉತ್ತರಾಧಿಕಾರಿಯನ್ನು ನಾಳೆ ಆರಿಸುವ ಸಂಭವವಿದೆ.</p>.<p><strong>ನಕಲಿ ವೈದ್ಯಕೀಯ ಕಾಲೇಜು–ಗಣ್ಯರ ಬಂಧನ</strong></p>.<p>ರಾಯಚೂರು, ಏ. 18– ಸಿಂಧನೂರಿನಲ್ಲಿ ನಕಲಿ ವೈದ್ಯಕೀಯ ಕಾಲೇಜೊಂದನ್ನು ಸ್ಥಾಪಿಸಿ ಅನೇಕ ಮುಗ್ಧ ವಿದ್ಯಾರ್ಥಿಗಳನ್ನು ವಂಚಿಸಿದ ಆರೋಪದ ಮೇಲೆ ಅಲ್ಲಿನ ಪೊಲೀಸರು ಇಬ್ಬರು ವೈದ್ಯರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಸಿಂಧನೂರಿನ ಇತರ ಕೆಲ ಪ್ರತಿಷ್ಠಿತರು ಬಂಧನದ ಬೆದರಿಕೆಯಿಂದ ಭೂಗತರಾಗಿದ್ದು ಅವರಿಗಾಗಿ ಶೋಧ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>