<p><strong>ನವದೆಹಲಿ, ಜೂನ್ 6:</strong> ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ತಾನದ ಅತಿಕ್ರಮಣಕಾರರ ವಿರುದ್ಧ ನಿನ್ನೆ ಸ್ಥಗಿತಗೊಳಿಸಿದ್ದ ವಾಯುದಾಳಿಯನ್ನು ಭಾರತ ಇಂದು ಮುಂದುವರಿಸುವ ಮೂಲಕ ಸೇನಾ ಕಾರ್ಯಾಚರಣೆಯನ್ನು ಮತ್ತೆ ಬಿರುಸುಗೊಳಿಸಿತು.</p><p>ಈ ನಡುವೆ ಪಾಕಿಸ್ತಾನದ ವಿದೇಶಾಂಗ ಸಚಿವ ಸರ್ತಾಜ್ ಅಜೀಜ್ ಅವರ ಉದ್ದೇಶಿತ ಭಾರತ ಭೇಟಿ ಸಂದರ್ಭದಲ್ಲಿ ಕಾರ್ಗಿಲ್ ನಲ್ಲಿನ ಅತಿಕ್ರಮಣವು ಚರ್ಚೆಯ ಪ್ರಮುಖ ವಿಷಯವಾಗಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಕೆ.ರಘುನಾಥ್ ಅವರು ಟಿ.ವಿ. ಚಾನೆಲ್ವೊಂದಕ್ಕೆ ಇಂದು ರಾತ್ರಿ ತಿಳಿಸಿದ್ದಾರೆ.</p> <p><strong>ಗೋವಾದಲ್ಲಿ ಕಾಂಗ್ರೆಸ್ಗೆ ಬಹುಮತ</strong></p><p><strong>ಪಣಜಿ, ಜೂನ್ 6:</strong> ಗೋವಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬಂದಿದೆ. ರಾಜಕೀಯ ಅಭದ್ರತೆಯ ನೆಲೆವೀಡಾಗಿದ್ದ ಈ ರಾಜ್ಯಕ್ಕೆ ಕೊನೆಗೂ ರಾಜಕೀಯ ಸ್ಥಿರತೆ ಮರಳಿದಂತೆ ಆಗಿದೆ.</p><p>10 ವರ್ಷಗಳಲ್ಲಿ 9 ಮುಖ್ಯಮಂತ್ರಿಗಳನ್ನು ಕಂಡ ಗೋವಾದಲ್ಲಿ ಕಳೆದ 4 ತಿಂಗಳುಗಳಿಂದ ರಾಷ್ಟ್ರಪತಿ ಆಳ್ವಿಕೆಯಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ, ಜೂನ್ 6:</strong> ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ತಾನದ ಅತಿಕ್ರಮಣಕಾರರ ವಿರುದ್ಧ ನಿನ್ನೆ ಸ್ಥಗಿತಗೊಳಿಸಿದ್ದ ವಾಯುದಾಳಿಯನ್ನು ಭಾರತ ಇಂದು ಮುಂದುವರಿಸುವ ಮೂಲಕ ಸೇನಾ ಕಾರ್ಯಾಚರಣೆಯನ್ನು ಮತ್ತೆ ಬಿರುಸುಗೊಳಿಸಿತು.</p><p>ಈ ನಡುವೆ ಪಾಕಿಸ್ತಾನದ ವಿದೇಶಾಂಗ ಸಚಿವ ಸರ್ತಾಜ್ ಅಜೀಜ್ ಅವರ ಉದ್ದೇಶಿತ ಭಾರತ ಭೇಟಿ ಸಂದರ್ಭದಲ್ಲಿ ಕಾರ್ಗಿಲ್ ನಲ್ಲಿನ ಅತಿಕ್ರಮಣವು ಚರ್ಚೆಯ ಪ್ರಮುಖ ವಿಷಯವಾಗಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಕೆ.ರಘುನಾಥ್ ಅವರು ಟಿ.ವಿ. ಚಾನೆಲ್ವೊಂದಕ್ಕೆ ಇಂದು ರಾತ್ರಿ ತಿಳಿಸಿದ್ದಾರೆ.</p> <p><strong>ಗೋವಾದಲ್ಲಿ ಕಾಂಗ್ರೆಸ್ಗೆ ಬಹುಮತ</strong></p><p><strong>ಪಣಜಿ, ಜೂನ್ 6:</strong> ಗೋವಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬಂದಿದೆ. ರಾಜಕೀಯ ಅಭದ್ರತೆಯ ನೆಲೆವೀಡಾಗಿದ್ದ ಈ ರಾಜ್ಯಕ್ಕೆ ಕೊನೆಗೂ ರಾಜಕೀಯ ಸ್ಥಿರತೆ ಮರಳಿದಂತೆ ಆಗಿದೆ.</p><p>10 ವರ್ಷಗಳಲ್ಲಿ 9 ಮುಖ್ಯಮಂತ್ರಿಗಳನ್ನು ಕಂಡ ಗೋವಾದಲ್ಲಿ ಕಳೆದ 4 ತಿಂಗಳುಗಳಿಂದ ರಾಷ್ಟ್ರಪತಿ ಆಳ್ವಿಕೆಯಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>