<p>ಮಂಡ್ಯ, ಜುಲೈ 1– ಜಿಲ್ಲೆಯ ಮದ್ದೂರು ತಾಲ್ಲೂಕು ಶಿಂಷಾ ನದಿ ದಡದಲ್ಲಿರುವ ಅಣೆತಗ್ಗಹಳ್ಳಿ ಗ್ರಾಮಕ್ಕೆ ಈಗ ಸೂತಕ ತಟ್ಟಿ, ತಿಥಿ ದಿನಗಳನ್ನು ಎದುರಿಸುತ್ತಿದೆ.</p><p>ಗ್ರಾಮಸ್ಥರು ಕೇವಲ ಒಂದು ವಾರಾವಧಿಯಲ್ಲಿ ನಾಲ್ಕು ಸಾವು ಕಂಡು ಅಧೀರರಾಗಿದ್ದಾರೆ. ಗ್ರಾಮದಲ್ಲಿ ಹಿರಿಯರಾಗಿದ್ದ ಇಬ್ಬರು ಹೃದಯಾಘಾತಕ್ಕೆ ಒಳಗಾದರೆ ಇನ್ನಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಗ್ರಾಮ ಎಲ್ಲರ ಗಮನ ಸೆಳೆದು ಹಗಲು–ರಾತ್ರಿ ಪೊಲೀಸರ ಸರ್ಪಗಾವಲಿನಲ್ಲಿದೆ.</p><p>ಗ್ರಾಮದ ಸೂತಕಕ್ಕೆ ಕಾರಣರಾಗಿರುವವರು ಚನ್ನಬಸಪ್ಪ, ದೊಳ್ಳೇಗೌಡ, ಕರೀಗೌಡ, ಚಿಕ್ಕೋನಯ್ಯ ಎಂಬ 60 ವರ್ಷ ಗಡಿ ದಾಟಿದ ವೃದ್ಧರು.</p><p><strong>ಸತತ ಮಳೆ: ಮನೆ ಕುಸಿದು ಮೂವರ ಸಾವು</strong></p><p>ಅಫಜಲಪುರ, ಜುಲೈ 1– ಜಿಲ್ಲೆಯಲ್ಲಿ ಕಳೆದ ಎರಡು ದಿನಗಳ ಕಾಲ ಸತತವಾಗಿ ಮಳೆ ಬಿದ್ದ ಕಾರಣ ಅಫಜಲಪುರ ತಾಲ್ಲೂಕಿನ ಬಂಕಲಗಿ ಗ್ರಾಮದಲ್ಲಿ ಮನೆಯೊಂದು ಕುಸಿದು ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.</p><p>ಸತ್ತವರು ಹೊನ್ನಪ್ಪ ಪೂಜಾರಿ (28), ಆತನ ಹೆಂಡತಿ ಭಾರತೀ ಬಾಯಿ (24) ಮತ್ತು ಮಗು ಮಲ್ಲಿನಾಥ (2).</p><p>ಘಟನಾ ಸ್ಥಳಕ್ಕೆ ಉಪ ಆಯುಕ್ತ ಮಹದೇವ್ ಭೇಟಿ ನೀಡಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯ, ಜುಲೈ 1– ಜಿಲ್ಲೆಯ ಮದ್ದೂರು ತಾಲ್ಲೂಕು ಶಿಂಷಾ ನದಿ ದಡದಲ್ಲಿರುವ ಅಣೆತಗ್ಗಹಳ್ಳಿ ಗ್ರಾಮಕ್ಕೆ ಈಗ ಸೂತಕ ತಟ್ಟಿ, ತಿಥಿ ದಿನಗಳನ್ನು ಎದುರಿಸುತ್ತಿದೆ.</p><p>ಗ್ರಾಮಸ್ಥರು ಕೇವಲ ಒಂದು ವಾರಾವಧಿಯಲ್ಲಿ ನಾಲ್ಕು ಸಾವು ಕಂಡು ಅಧೀರರಾಗಿದ್ದಾರೆ. ಗ್ರಾಮದಲ್ಲಿ ಹಿರಿಯರಾಗಿದ್ದ ಇಬ್ಬರು ಹೃದಯಾಘಾತಕ್ಕೆ ಒಳಗಾದರೆ ಇನ್ನಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಗ್ರಾಮ ಎಲ್ಲರ ಗಮನ ಸೆಳೆದು ಹಗಲು–ರಾತ್ರಿ ಪೊಲೀಸರ ಸರ್ಪಗಾವಲಿನಲ್ಲಿದೆ.</p><p>ಗ್ರಾಮದ ಸೂತಕಕ್ಕೆ ಕಾರಣರಾಗಿರುವವರು ಚನ್ನಬಸಪ್ಪ, ದೊಳ್ಳೇಗೌಡ, ಕರೀಗೌಡ, ಚಿಕ್ಕೋನಯ್ಯ ಎಂಬ 60 ವರ್ಷ ಗಡಿ ದಾಟಿದ ವೃದ್ಧರು.</p><p><strong>ಸತತ ಮಳೆ: ಮನೆ ಕುಸಿದು ಮೂವರ ಸಾವು</strong></p><p>ಅಫಜಲಪುರ, ಜುಲೈ 1– ಜಿಲ್ಲೆಯಲ್ಲಿ ಕಳೆದ ಎರಡು ದಿನಗಳ ಕಾಲ ಸತತವಾಗಿ ಮಳೆ ಬಿದ್ದ ಕಾರಣ ಅಫಜಲಪುರ ತಾಲ್ಲೂಕಿನ ಬಂಕಲಗಿ ಗ್ರಾಮದಲ್ಲಿ ಮನೆಯೊಂದು ಕುಸಿದು ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.</p><p>ಸತ್ತವರು ಹೊನ್ನಪ್ಪ ಪೂಜಾರಿ (28), ಆತನ ಹೆಂಡತಿ ಭಾರತೀ ಬಾಯಿ (24) ಮತ್ತು ಮಗು ಮಲ್ಲಿನಾಥ (2).</p><p>ಘಟನಾ ಸ್ಥಳಕ್ಕೆ ಉಪ ಆಯುಕ್ತ ಮಹದೇವ್ ಭೇಟಿ ನೀಡಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>