<p><strong>ದಳದ ಜತೆ ಮೈತ್ರಿಗೆ ಬಿಎಸ್ಪಿ ನಕಾರ</strong></p>.<p><strong>ನವದೆಹಲಿ, ಮಾರ್ಚ್ 24 (ಪಿಟಿಐ)–</strong> ಮುಂಬರುವ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನ ಹತ್ತಿರ ಬರುತ್ತಿದ್ದರೂ ವಿವಿಧ ರಾಜಕೀಯ ಪಕ್ಷಗಳ ಮಧ್ಯೆ ಹೊಂದಾಣಿಕೆ ಕಸರತ್ತು ಇನ್ನೂ ಮುಗಿದಿಲ್ಲ. ದಳ–ಬಿಎಸ್ಪಿ ಮೈತ್ರಿ ಮುರಿದು ಬಿದ್ದಿದ್ದು ಇಂದಿನ ವಿದ್ಯಮಾನ.</p>.<p>ರಾಷ್ಟ್ರಮಟ್ಟದಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಭಾರತೀಯ ಜನತಾ ಪಕ್ಷ ಸ್ಪಷ್ಟಪಡಿಸಿದ್ದು ಜನತಾದಳದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯನ್ನು ಬಹುಜನ ಸಮಾಜ ಪಕ್ಷ ತಳ್ಳಿಹಾಕಿದೆ. ಈ ನಡುವೆ, ಉತ್ತರ ಪ್ರದೇಶದಲ್ಲಿ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವ ಕುರಿತಂತೆ ಜನತಾದಳ ಮತ್ತು ಸಮಾಜವಾದಿ ಜನತಾಪಕ್ಷಗಳು ಇಂದು ಸಭೆ ನಡೆಸಿದವು.</p>.<p><strong>ಕಾಂಗೈ ಒಳಗಿನ ದುಷ್ಟಶಕ್ತಿ ತೊಲಗಿಸಲು ರಾವ್ ಪಣ</strong></p>.<p><strong>ನವದೆಹಲಿ, ಮಾರ್ಚ್ 24 (ಪಿಟಿಐ)– </strong>ಪಕ್ಷದೊಳಗೇ ಇರುವ ದುಷ್ಟಶಕ್ತಿಗಳನ್ನು ತೊಲಗಿಸಿ ಹೊಸ ರಕ್ತದೊಂದಿಗೆ ಪಕ್ಷವನ್ನು ಪುನರ್ರಚಿಸುವುದಾಗಿ ಕಾಂಗೈ ಅಧ್ಯಕ್ಷರೂ ಆಗಿರುವ ಪ್ರಧಾನಿ ಪಿ.ವಿ. ನರಸಿಂಹರಾವ್ ಇಂದು ಇಲ್ಲಿ ಘೋಷಿಸಿದರು.</p>.<p>ದೆಹಲಿ ಪ್ರದೇಶ ಕಾಂಗೈ ಸಮಿತಿ ಏರ್ಪಡಿಸಿದ್ದ ಸಂಕಲ್ಪ ರ್ಯಾಲಿಯಲ್ಲಿ ಅವರು ಮಾತನಾಡುತ್ತಿದ್ದರು. ಹವಾಲ ಹಗರಣವನ್ನು ಪ್ರಸ್ತಾಪಿಸದೆ ಮಾತನಾಡಿದ ಅವರು, ಪಕ್ಷದೊಳಗೆ ಕೆಲವು ದುಷ್ಟಶಕ್ತಿಗಳಿವೆ. ಅವುಗಳನ್ನು ತೊಲಗಿಸಬೇಕಾಗಿದೆ ಮತ್ತು ಪಕ್ಷದೊಳಕ್ಕೆ ಹೊಸ ಮುಖಗಳ ಸೇರ್ಪಡೆಯಾಗಬೇಕಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಳದ ಜತೆ ಮೈತ್ರಿಗೆ ಬಿಎಸ್ಪಿ ನಕಾರ</strong></p>.<p><strong>ನವದೆಹಲಿ, ಮಾರ್ಚ್ 24 (ಪಿಟಿಐ)–</strong> ಮುಂಬರುವ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನ ಹತ್ತಿರ ಬರುತ್ತಿದ್ದರೂ ವಿವಿಧ ರಾಜಕೀಯ ಪಕ್ಷಗಳ ಮಧ್ಯೆ ಹೊಂದಾಣಿಕೆ ಕಸರತ್ತು ಇನ್ನೂ ಮುಗಿದಿಲ್ಲ. ದಳ–ಬಿಎಸ್ಪಿ ಮೈತ್ರಿ ಮುರಿದು ಬಿದ್ದಿದ್ದು ಇಂದಿನ ವಿದ್ಯಮಾನ.</p>.<p>ರಾಷ್ಟ್ರಮಟ್ಟದಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಭಾರತೀಯ ಜನತಾ ಪಕ್ಷ ಸ್ಪಷ್ಟಪಡಿಸಿದ್ದು ಜನತಾದಳದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯನ್ನು ಬಹುಜನ ಸಮಾಜ ಪಕ್ಷ ತಳ್ಳಿಹಾಕಿದೆ. ಈ ನಡುವೆ, ಉತ್ತರ ಪ್ರದೇಶದಲ್ಲಿ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವ ಕುರಿತಂತೆ ಜನತಾದಳ ಮತ್ತು ಸಮಾಜವಾದಿ ಜನತಾಪಕ್ಷಗಳು ಇಂದು ಸಭೆ ನಡೆಸಿದವು.</p>.<p><strong>ಕಾಂಗೈ ಒಳಗಿನ ದುಷ್ಟಶಕ್ತಿ ತೊಲಗಿಸಲು ರಾವ್ ಪಣ</strong></p>.<p><strong>ನವದೆಹಲಿ, ಮಾರ್ಚ್ 24 (ಪಿಟಿಐ)– </strong>ಪಕ್ಷದೊಳಗೇ ಇರುವ ದುಷ್ಟಶಕ್ತಿಗಳನ್ನು ತೊಲಗಿಸಿ ಹೊಸ ರಕ್ತದೊಂದಿಗೆ ಪಕ್ಷವನ್ನು ಪುನರ್ರಚಿಸುವುದಾಗಿ ಕಾಂಗೈ ಅಧ್ಯಕ್ಷರೂ ಆಗಿರುವ ಪ್ರಧಾನಿ ಪಿ.ವಿ. ನರಸಿಂಹರಾವ್ ಇಂದು ಇಲ್ಲಿ ಘೋಷಿಸಿದರು.</p>.<p>ದೆಹಲಿ ಪ್ರದೇಶ ಕಾಂಗೈ ಸಮಿತಿ ಏರ್ಪಡಿಸಿದ್ದ ಸಂಕಲ್ಪ ರ್ಯಾಲಿಯಲ್ಲಿ ಅವರು ಮಾತನಾಡುತ್ತಿದ್ದರು. ಹವಾಲ ಹಗರಣವನ್ನು ಪ್ರಸ್ತಾಪಿಸದೆ ಮಾತನಾಡಿದ ಅವರು, ಪಕ್ಷದೊಳಗೆ ಕೆಲವು ದುಷ್ಟಶಕ್ತಿಗಳಿವೆ. ಅವುಗಳನ್ನು ತೊಲಗಿಸಬೇಕಾಗಿದೆ ಮತ್ತು ಪಕ್ಷದೊಳಕ್ಕೆ ಹೊಸ ಮುಖಗಳ ಸೇರ್ಪಡೆಯಾಗಬೇಕಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>