<blockquote>ಬಳ್ಳಾರಿಯಲ್ಲಿ ಸೋನಿಯಾ- ಸುಷ್ಮಾ ಸೆಣಸಾಟ </blockquote>.<p>ಬೆಂಗಳೂರು, ಆ. 18– ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಜ್ಯದ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಇಂದು ನಾಮಪತ್ರ ಸಲ್ಲಿಸಿರುವುದ ರಿಂದ ಈ ಕ್ಷೇತ್ರ ಈಗ ಅಂತರರಾಷ್ಟ್ರೀಯವಾಗಿ ಗಮನ ಸೆಳೆದಿದೆ.</p>.<p>ಈ ನಡುವೆ, ದೆಹಲಿಯ ಮಾಜಿ ಮುಖ್ಯಮಂತ್ರಿ ಸುಷ್ಮಾ ಸ್ವರಾಜ್ ಅವರು ಸೋನಿಯಾ ಗಾಂಧಿ ವಿರುದ್ಧ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಇದೇ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವುದು ತೀವ್ರ ಕುತೂಹಲ ಹಾಗೂ ಅಚ್ಚರಿ ಮೂಡಿಸಿದೆ.</p>.<p>ಜತೆಗೆ ಕಾಂಗ್ರೆಸ್ ತೊರೆದು ಇತ್ತೀಚೆಗೆ ಬಿಜೆಪಿ ಸೇರಿರುವ ಎಂ. ರಾಜಶೇಖರಮೂರ್ತಿ ಅವರು ಸಹ ಬಿಜೆಪಿ ಅಭ್ಯರ್ಥಿಯಾಗಿ ಬಳ್ಳಾರಿಯಿಂದಲೇ ನಾಮಪತ್ರ ಸಲ್ಲಿಸಿದ್ದಾರೆ.</p>.<blockquote>ಹೆಗಡೆ ವಿರುದ್ಧ ಸ್ಫೋಟಿಸಿದ ಆಕ್ರೋಶ </blockquote>.<p>ಬೆಂಗಳೂರು, ಆ. 18– ಲೋಕಶಕ್ತಿ ಮತ್ತು ಜನತಾದಳ (ಯು) ಮೈತ್ರಿಕೂಟದ ಅಭ್ಯರ್ಥಿಗಳಿಗೆ ಚುನಾವಣಾ ಸ್ಪರ್ಧೆಗೆ ಟಿಕೆಟ್ ಹಂಚುವ ಪ್ರಕ್ರಿಯೆ ತೀರಾ ಗೊಂದಲಕ್ಕೆ ಸಿಲುಕಿ ಎರಡೂ ಪಕ್ಷಗಳಲ್ಲಿ ಭಾರಿ ಅಸಮಾಧಾನ, ಆಕ್ರೋಶ ಹಾಗೂ ಪ್ರತಿಭಟನೆಗಳಿಗೆ ಕಾರಣವಾಗಿದೆ.</p>.<p>ಲೋಕಶಕ್ತಿಯ ಮುಖಂಡರನೇಕರು ಇಂದು ಬೆಳಗಿನ ಜಾವದಿಂದಲೇ ರಾಮಕೃಷ್ಣ ಹೆಗಡೆ ಅವರ ನಿವಾಸದ ಮುಂದೆ ಜಮಾಯಿಸಿ ‘ಬಿ ಫಾರಂ’ ಪಡೆಯಲು ಕಾತರರಾಗಿದ್ದರು. ಆದರೆ ಎಲ್ಲ ‘ಬಿ ಫಾರಂ’ಗಳನ್ನೂ ಜನತಾದಳ (ಯು) ಅಧ್ಯಕ್ಷ ಬೈರೇಗೌಡ ತೆಗೆದುಕೊಂಡು ಹೋಗಿದ್ದರಿಂದ ಲೋಕಶಕ್ತಿಯ ಟಿಕೆಟ್ಆ ಕಾಂಕ್ಷಿಗಳಿಗೆ ತೀವ್ರ ನಿರಾಸೆಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಬಳ್ಳಾರಿಯಲ್ಲಿ ಸೋನಿಯಾ- ಸುಷ್ಮಾ ಸೆಣಸಾಟ </blockquote>.<p>ಬೆಂಗಳೂರು, ಆ. 18– ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಜ್ಯದ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಇಂದು ನಾಮಪತ್ರ ಸಲ್ಲಿಸಿರುವುದ ರಿಂದ ಈ ಕ್ಷೇತ್ರ ಈಗ ಅಂತರರಾಷ್ಟ್ರೀಯವಾಗಿ ಗಮನ ಸೆಳೆದಿದೆ.</p>.<p>ಈ ನಡುವೆ, ದೆಹಲಿಯ ಮಾಜಿ ಮುಖ್ಯಮಂತ್ರಿ ಸುಷ್ಮಾ ಸ್ವರಾಜ್ ಅವರು ಸೋನಿಯಾ ಗಾಂಧಿ ವಿರುದ್ಧ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಇದೇ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವುದು ತೀವ್ರ ಕುತೂಹಲ ಹಾಗೂ ಅಚ್ಚರಿ ಮೂಡಿಸಿದೆ.</p>.<p>ಜತೆಗೆ ಕಾಂಗ್ರೆಸ್ ತೊರೆದು ಇತ್ತೀಚೆಗೆ ಬಿಜೆಪಿ ಸೇರಿರುವ ಎಂ. ರಾಜಶೇಖರಮೂರ್ತಿ ಅವರು ಸಹ ಬಿಜೆಪಿ ಅಭ್ಯರ್ಥಿಯಾಗಿ ಬಳ್ಳಾರಿಯಿಂದಲೇ ನಾಮಪತ್ರ ಸಲ್ಲಿಸಿದ್ದಾರೆ.</p>.<blockquote>ಹೆಗಡೆ ವಿರುದ್ಧ ಸ್ಫೋಟಿಸಿದ ಆಕ್ರೋಶ </blockquote>.<p>ಬೆಂಗಳೂರು, ಆ. 18– ಲೋಕಶಕ್ತಿ ಮತ್ತು ಜನತಾದಳ (ಯು) ಮೈತ್ರಿಕೂಟದ ಅಭ್ಯರ್ಥಿಗಳಿಗೆ ಚುನಾವಣಾ ಸ್ಪರ್ಧೆಗೆ ಟಿಕೆಟ್ ಹಂಚುವ ಪ್ರಕ್ರಿಯೆ ತೀರಾ ಗೊಂದಲಕ್ಕೆ ಸಿಲುಕಿ ಎರಡೂ ಪಕ್ಷಗಳಲ್ಲಿ ಭಾರಿ ಅಸಮಾಧಾನ, ಆಕ್ರೋಶ ಹಾಗೂ ಪ್ರತಿಭಟನೆಗಳಿಗೆ ಕಾರಣವಾಗಿದೆ.</p>.<p>ಲೋಕಶಕ್ತಿಯ ಮುಖಂಡರನೇಕರು ಇಂದು ಬೆಳಗಿನ ಜಾವದಿಂದಲೇ ರಾಮಕೃಷ್ಣ ಹೆಗಡೆ ಅವರ ನಿವಾಸದ ಮುಂದೆ ಜಮಾಯಿಸಿ ‘ಬಿ ಫಾರಂ’ ಪಡೆಯಲು ಕಾತರರಾಗಿದ್ದರು. ಆದರೆ ಎಲ್ಲ ‘ಬಿ ಫಾರಂ’ಗಳನ್ನೂ ಜನತಾದಳ (ಯು) ಅಧ್ಯಕ್ಷ ಬೈರೇಗೌಡ ತೆಗೆದುಕೊಂಡು ಹೋಗಿದ್ದರಿಂದ ಲೋಕಶಕ್ತಿಯ ಟಿಕೆಟ್ಆ ಕಾಂಕ್ಷಿಗಳಿಗೆ ತೀವ್ರ ನಿರಾಸೆಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>