ನೈರುತ್ಯ ರೈಲ್ವೆ ವಲಯವನ್ನು ಹುಬ್ಬಳ್ಳಿಯಲ್ಲಿಯೇ ಸ್ಥಾಪಿಸಲು ಆಗ್ರಹಿಸಿ ಉತ್ತರ ಕರ್ನಾಟಕ ಅಭಿವೃದ್ಧಿ ಪರ ಹೋರಾಟ ಸಮಿತಿ ನಾಳೆ ಹುಬ್ಬಳ್ಳಿ ಬಂದ್ಗೆ ಕರೆ ನಡಿದ್ದು, ಬಂದ್ ಪರ ಮತ್ತು ವಿರೋಧಿ ಗುಂಪುಗಳ ಮೆರವಣಿಗೆ, ಘೋಷಣೆ, ಸಮಿತಿಯ ಸದಸ್ಯರ ನಿರಶನ ಮುಂತಾದ ಘಟನೆಗಳಿಂದ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ.